ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ. ಜೀವದ ಹಂಗು ತೊರೆದು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ. ಎಂಎಲ್ಸಿ ಶ್ರೀಕಂಠೇಗೌಡರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೊರೊನಾ ಜಾಗೃತಿಯಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಬರಲು ಪತ್ರಕರ್ತರು ಕೂಡ ಕಾರಣ. ಇನ್ನೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಝೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಸಿದ್ದರಾಮಯ್ಯನವರು ಗ್ರೀನ್ ಝೋನ್ನಲ್ಲಿರುವ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಮಾಡಿಕೊಡಿ ಎಂದಿದ್ದಾರೆ. ಆದರೆ, ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು. ಲಾಕ್ಡೌನ್ ವೇಳೆಯ ಆರ್ಥಿಕ ನಷ್ಟ ತಡೆಯುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.
ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು:ಶ್ರೀರಾಮುಲು
Please follow and like us: