ಕರೋನ ವೈರಸ್ ಸಾಂಕ್ರಾಮಿಕ ಸೋಂಕು ಹರಡತ್ತಿರುವ ಮಧ್ಯೆ ಕೆಂಪು ವಲಯದಲ್ಲಿ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯುವುದು ಅಷ್ಟು ಸರಿಯಲ್ಲ ಇದು ಅತ್ಯಂತ ಕೆಟ್ಟ ಸಲಹೆಯಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಕ್ ಹೇಳಿದ್ದಾರೆ. ಏಕಾಏಕಿ ಲಾಕ್ ಡೌನ್ ಮಧ್ಯೆ ವಿಮಾನ ಪ್ರಯಾಣ ಸೇವೆಗಳನ್ನು ಕಾಲಕ್ರಮೇಣ ರೀಬೂಟ್ ಮಾಡುವ ಭಾಗವಾಗಿ ಎಲ್ಲಾ ದೇಶೀಯ ವಿಮಾನಗಳು ಮೇ ೨೫ ರಿಂದ ಭಾರತದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರ್ದೀಪ್ ಸಿಂಗ್ ಪುರಿ ಘೋಷಿಸಿದ ನಂತರ ಅನಿಲ್ ದೇಶ್ಮುಕ್ ಅಭಿಪ್ರಾಯಗಳು ಹೊರಬಿದ್ದಿವೆ.
ಕೆಂಪು ವಲಯದಲ್ಲಿ ವಿಮಾನ ಹಾರಾಟ ಸರಿಯಲ್ಲ
Please follow and like us: