ಕೊರೊನಾ ಸೋಂಕು ಎಲ್ಲಿ ಹಬ್ಬಿಬಿಡುತ್ತದೋ ಎಂದು ಗಾಬರಿಗೊಂಡ ಪತಿ ಮಹಾಶಯನೊಬ್ಬ ಮನೆಗೆ ಬಂದ ಪತ್ನಿಗೆ ಬಾಗಿಲು ತೆಗೆಯಲು ಹಿಂದೇಟು ಹಾಕಿರುವ ಘಟನೆ ನಡೆದಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಪರಿಣಾಮ ಎಲ್ಲವೂ ಸ್ತಬ್ದಗೊಂಡವು. ಹೀಗಾಗಿ ದೂರದ ಚಂಡೀಘಡದಲ್ಲಿದ್ದ ಪತ್ನಿ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಮನೆಗೆ ಬಂದರೆ ಪತಿಯಿಂದ ತುಂಬು ಹೃದಯದ ಸ್ವಾಗತ ಸಿಗಬಹುದೆಂದು ನಿರೀಕ್ಷೆಯಲ್ಲಿದ್ದ ಪತ್ನಿಗೆ ಏಕಾಏಕಿ ಸಿಡಿಲು ಬಡಿದಂತಾಯಿತು. ಏಕೆಂದರೆ ಜಪ್ಪಯ್ಯ ಎಂದರೂ ಪತಿ ಪತ್ನಿಗೆ ಮನೆಯ ಬಾಗಿಲನ್ನೇ ತೆಗೆಯಲಿಲ್ಲ. ಕೊನೆಗೆ ಮಹಿಳೆ ತಾನು ೧೪ ದಿನ ಮನೆಯಲ್ಲಿ ನಿಮ್ಮಿಬ್ಬರಿಂದ ದೂರವಿದ್ದು ಕ್ವಾರಂಟೈನಲ್ಲಿರುತ್ತೇನೆ. ಕೋವಿಡ್ ನೆಗೆಟಿವ್ ವರದಿ ಬಂದ ಬಳಿಕ ಹೊರಗೆ ಬರುತ್ತೇನೆ ಎಂದು ಕೇಳಿದರೂ ಪತಿ ಬಾಗಿಲು ತೆಗೆದಿಲ್ಲ.
ಕೊರೊನ ಭೀತಿ ಹಿನ್ನಲೆ -ಪತ್ನಿಯನ್ನೇ ಮನೆಗೆ ಸೇರಿಸಿಕೊಳ್ಳದ ಪತಿ
Please follow and like us: