ಬೆಂಗಳೂರಿನ ಯಲಹಂಕ ಪ್ಲೈಓವರ್ಗೆ, ವೀರ್ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಯಾರೋ ಅನಾಮಿಕರು ರಾತ್ರಿ ಸಂದರ್ಭದಲ್ಲಿ ಮಂಗಳೂರಿನ ಪಂಪ್ವೆಲ್ ಮೇಲ್ಸೇತುವೆಗೆ ವೀರ್ ಸಾವರ್ಕರ್ ಬ್ಯಾನರ್ ಕಟ್ಟಿದ್ದಾರೆ. ಅದರ ಸಮೀಪದಲ್ಲಿ ಭಜರಂಗದಳ ಅಂತ ಬರೆದಿದ್ದಾರೆ.ಪಂಪ್ ವೆಲ್ ಪ್ಲೈಓವರ್ ಮೇಲೆ ಈ ಪೋಸ್ಟರ್ ಕಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.