ರಾಜ್ಯದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ. ಇಂದು ಒಂದು ಪ್ರಕರಣ ಕೂಡ ಬೆಳಕಿಗೆ ಬಂದಿಲ್ಲ. ಇಂದು ಹೊಸದಾಗಿ 11 ಕೊರೋನಾ ಕೇಸ್ ರಾಜ್ಯದಲ್ಲಿ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಹಾಗೇ ರಾಜ್ಯದಲ್ಲಿ ಕೊರೋನಾ ಸಾವಿನ ಸರಣಿ ಮುಂದುವರೆದಿದೆ. ತುಮಕೂರಿನಲ್ಲಿ 74 ವರ್ಷದ ವೃದ್ಧ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿರುವುದಾಗಿ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ ಕಲಬುರ್ಗಿಯಲ್ಲಿ 8. ದಾವಣಗೆರೆಯಲ್ಲಿ 1 , ಮೈಸೂರಿನಲ್ಲಿ 1, ಹಾಗೂ ಬೆಳಗಾವಿಯಲ್ಲಿ 1 ಪ್ರಕರಣ ದೃಡಪಟ್ಟಿದ್ದು ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ..

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನಿಧನ

Thu Apr 30 , 2020
ನಿನ್ನೆ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ ನಿಧನ ಬೆನ್ನಲೆ ಇಂದು ಇನ್ನೋರ್ವ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಕೂಡ ಇಹಲೋಕ ತ್ಯೆಜಿಸಿದ್ದಾರೆ. ಹೀಗೆ ಒಬ್ಬರ ಬೆನ್ನಿಗೆ ಒಬ್ಬರಂತೆ ಹಿರಿಯ ನಟರು ಸಾವನ್ನಪ್ಪಿದ್ದು, ಇಡೀ ಬಾಲಿವುಡ್‌ಗೆ ತುಂಬಲಾರದ ನಷ್ಟ ಉಂಟಾಗಿದೆ. ನಿನ್ನೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್ ಬೆಳಗ್ಗೆಯಷ್ಟರಲ್ಲಿ ಮುಂಬೈನ ಹೆಚ್‌ಎನ್ ರಿಯಲನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ . ನಟ ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ಕಂಬನಿ […]

Advertisement

Wordpress Social Share Plugin powered by Ultimatelysocial