ಹೈಟೆಕ್ ಪೊಲೀಸ್ ಚೌಕಿಗಳ ಉದ್ಘಾಟನೆ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ೨೩ ಜಂಕ್ಷನ್ / ವೃತ್ತಗಳಲ್ಲಿ ಪಿಪಿಪಿ ಮಾದರಿಯಲ್ಲಿ “ಹೈಟೆಕ್ ಪೊಲೀಸ್ ಚೌಕಿ(ಕಿಯೋಸ್ಕ್)”ಗಳನ್ನು ಮಹಾಪೌರರು ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್ ಉದ್ಘಾಟಿಸಿದರು.
ನಗರದ ಸಂಚಾರಿ ಪೊಲೀಸರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಬಿಎಂಪಿಯು ಸಂಚಾರಿ ಪೊಲೀಸ್ ವೀಭಾಗದ ಜೊತೆ ಚರ್ಚಿಸಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ Signpostಸಂಸ್ಥೆ ವತಿಯಿಂದ ಮೊದಲ ಹಂತದಲ್ಲಿ ಪ್ರಮುಖ ೨೩ ಜಂಕ್ಷನ್ / ವೃತ್ತಗಳಲ್ಲಿ ಕಿಯೋಸ್ಕ್ ಗಳನ್ನು ತೆರೆಯಲಾಗುತ್ತಿದೆ. ಇನ್ನಿತರೆ ಗುರುತಿಸಿರುವ ಪ್ರಮುಖ ಸ್ಥಳಗಳಲ್ಲಿ  ಹಂತ-ಹಂತವಾಗಿ ಕಿಯೋಸ್ಕ್ ಗಳನ್ನು ನಿರ್ಮಿಸಲಾಗುವುದು ಎಂದು ಮಾತನಾಡಿದರು.
ಮಳೆ, ಬಿಸಿಲು ಮತ್ತು ದೂಳಿನಿಂದ ಟ್ರಾಫಿಕ್ ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಲಾಗುತ್ತಿದೆ. ಬಿಬಿಎಂಪಿಯು ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ PPP ಮಾದರಿಯಲ್ಲಿ ೩೪೦ ಸ್ಥಳಗಳಲ್ಲಿ ಅಳವಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ೨೦ ವರ್ಷಗಳ ಜಾಹೀರಾತು ಆಧಾರದ ಮೇಲೆ ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ ಮಾಡಲಾಗಿದೆ. ಹೈಟೆಕ್ ಕಿಯೋಸ್ಕ್ ಗಳ ನಿರ್ಮಾಣದಿಂದ ಪಾಲಿಕೆಗೆ ನೆಲಬಾಡಿಗೆ ಹಾಗೂ ಜಾಹಿರಾತು ಮೂಲಕ ವಾರ್ಷಿಕ ಸುಮಾರು ೨೦ ಲಕ್ಷ ರೂ. ಆದಾಯ ಬರುವ ಅಂದಾಜಿದೆ. ಇಂದು ಹಡ್ಸನ್ ವೃತ್ತ, ಟ್ರಿನಿಟಿ ವೃತ್ತ, ಶಾಂತಿನಗರ ಜಂಕ್ಷನ್, ಪೊಲೀಸ್ ಕಾರ್ನರ್, ಮೇಖ್ರಿ ವೃತ್ತ ಸೇರಿದಂತೆ ಪ್ರಮುಖ ೨೩ ಕಡೆ ಚಾಲನೆ ನೀಡಲಾಗಿದೆ. ಚೌಕಿಗಳಲ್ಲಿ ಸಂಚಾರ ಪೊಲೀಸರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ಗಾಳಿ ಶುದ್ಧೀಕರಿಸುವ ಯಂತ್ರ, ಕುರ್ಚಿ, ಟೇಬಲ್, ಎಕ್ಸಾಸ್ಟ್ ಫ್ಯಾನ್, ಸಾರ್ವಜನಿಕರ ಕುಂದು–ಕೊರತೆ ಪರಿಶೀಲನಾ ಬಾಕ್ಸ್, ಕುಡಿಯುವ ನೀರಿನ ಬಾಟಲ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ಸ್ಕ್ರೀನ್, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಒಂದು ಚೌಕಿಗೆ ಅಂದಾಜು ೮ ಲಕ್ಷ ರೂ. ಖರ್ಚಾಗುತ್ತದೆ ಎಂದು ತಿಳಿಸಿದರು.

ಇಂದು ಮಹಾಪೌರರು, ಆಯುಕ್ತರು ಬಿ.ಹೆಚ್.ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತರು ಶ್ರೀ ಭಾಸ್ಕರ್ ರಾವ್ ರವರ ಜೊತೆ ಹಡ್ಸನ್ ವೃತ್ತದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಈ ವೇಳೆ ಉಪಮಹಾಪೌರರು ಶ್ರೀ ರಾಮಮೋಹನ ರಾಜು, ವಿರೋಧ ಪಕ್ಷದ ನಾಯಕರು ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕರು ಶ್ರೀಮತಿ ನೇತ್ರಾ ನಾರಾಯಣ್, ರಸ್ತೆ ಮೂಲಭೂತ ಸೌಕರ್ಯ ವೀಭಾಗದ ಮುಖ್ಯ ಅಭಿಯಂತರರು ಶ್ರೀ ಸೋಮಶೇಖರ್, ಅಧೀಕ್ಷಕ ಅಭಿಯಂತರರು ಶ್ರೀ ಬಸವರಾಜದ ಕಬಾಡೆ, ಸಂಚಾರಿ ವಿಭಾಗದ ಜಂಟಿ ಆಯುಕ್ತರು ಶ್ರೀ ರವಿಕಾಂತೇ ಗೌಡ ಹಾಗೂ ಇತರರು ಉಪಸ್ಥಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಪ್ರವಾಸೋದ್ಯಮಕ್ಕೆ ೮೦% ರಷ್ಟು ಆದಾಯ ಇಳಿಕೆ

Fri May 8 , 2020
ಮ್ಯಾಡ್ರಿಡ್: ಕೋವಿಡ್ ಕಾರಣದಿಂದ ಈ ವರ್ಷ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಶೇ. ೬೦ರಿಂದ ೮೦ರಷ್ಟು ಇಳಿಕೆಯಾಗಬಹುದು ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಗತ್ತಿನಾದ್ಯಂತ ಪ್ರಯಾಣ ನಿರ್ಬಂಧಗಳು, ವಿಮಾನ ನಿಲ್ದಾಣಗಳ ಚಟುವಟಿಕೆಗಳ ಸ್ಥಗಿತ ಹಾಗೂ ಗಡಿಗಳನ್ನೂ ಮುಚ್ಚಲಾಗಿದೆ. ಇಂಥ ಸಂಕಷ್ಟ ೧೯೫೦ರ ಬಳಿಕ ಬಂದಿರಲಿಲ್ಲ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ. ೨೨ರಷ್ಟು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. […]

Advertisement

Wordpress Social Share Plugin powered by Ultimatelysocial