ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡುತ್ತಿರುವುದನ್ನ ಭಜರಂಗ ಬಳದವರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ ೪ ರ ನವಯುಗ ಟೋಲ್ ಬಳಿ ಭಜರಂಗ ದಳದ ಕಾರ್ಯಕರ್ತರುಗಳು ನಿಂತಿದ್ದ ಸಂದರ್ಭದಲ್ಲಿ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಏಸ್ ಹೊರಟಿತ್ತು .ಟೋಲ್ ಬಳಿ ಇದ್ದಕ್ಕಿದ್ದ ಹಾಗೆ ಟೆಂಪೊದಿAದ ಹಸುವೊಂದು ಕೆಳಗೆ ಬಿದ್ದದ್ದನ್ನ ಗಮನಿಸಿದ ಭಜರಂಗದಳದವರು ಪರಿಶೀಲಿಸಿದಾಗ ಹಸುಗಳಿರುವುದು ಗೊತ್ತಾಗಿದೆ ಜೊತೆಗೆ ಚಾಲಕರನ್ನ ಹೊಸ ಗುಡ್ಡದ ಹಳ್ಳಿ ನಿವಾಸಿ ಅಬ್ದುಲ್ ಜಹೀರ್, ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ವಾಹನದ ಕ್ಲೀನರ್ ಮೊಹಮ್ಮದ್ ಅನಾಮ್ ಹುಲ್ಲಾ ಎಂದು ಗುರುತಿಸಲಾಗಿದೆ. ವಾಹನದ ಹಾಗು ಗೋ ಸಾಗಣೆಯ ಪರ್ಮಿಷನ್ ಕೇಳಿದಾಗ ಹುಡುಗರು ತಡವರಿಸಿದ್ದನ್ನ ಕಂಡು ಭಜರಂಗದಳದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಅಕ್ರಮವಾಗಿ ಗೋವುಗಳ ಸಾಗಾಟ
Please follow and like us: