ಗುಡಿಸಲನ್ನು ಅಧಿಕಾರಿಗಳು ಕಿತ್ತು ಹಾಕಿದ್ದಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಕಾಲಿಗೆ ತುಂಬು ಗರ್ಭಿಣಿ ಬಿದ್ದು ಕಣ್ಣೀರಿಟ್ಟ ಘಟನೆ ರಾಯಚೂರಿನ ಜಿಲ್ಲಾಪಂಚಾಯತ್ ಕಛೇರಿ ಮುಂದೆ ನಡೆದಿದೆ. ೨೦೦೯ರಲ್ಲಿ ಬಂದಿದ್ದ ಕೃಷ್ಣ ನದಿ ಪ್ರವಾಹಕ್ಕೆ ಸೂರು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಕ್ಕೆ ಇಂದಿಗೂ ಆಸರೆ ಒದಗಿಸದ ಅಧಿಕಾರಿಗಳ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಹೆಚ್.ಸಿದ್ದಾಪುರ ಗ್ರಾಮದ ಗರ್ಭಿಣಿ ೨೦೦೯ರ ಸಮಯದಲ್ಲಿ ಪ್ರವಾಹಕ್ಕೆ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದರು, ತದನಂತರ ಸರ್ಕಾರ ಸೂರು ಕಳೆದುಕೊಂಡವರಿಗೆ ನಿವೇಶನಗಳನ್ನು ಗುರುತಿಸಿ ನೀಡಿತ್ತೆ ವಿನಃ ಕೆಲವರಿಗೆ ಮನೆಗಳನ್ನು ನೀಡಿರಲಿಲ್ಲ. ವಿಧಿಯಿಲ್ಲದೇ ಸರಕಾರ ಗುರುತಿಸಿದ ಸ್ಥಳದಲ್ಲಿ ಗುಡಿಸಲು ಹಾಕಿ ಬದುಕಿತ್ತಿದ್ದ ಗರ್ಭಿಣಿಗೆ ಕಿರುಕುಳ ನೀಡಿದ ಅಧಿಕಾರಿಗಳು ಎರಡು ದಿನಗಳ ಹಿಂದಷ್ಟೆ ಆಕೆಗೆ ಸೇರಿದ ಗುಡಿಸಲು ಸೇರಿ ಹಲವರ ಗುಡಿಸಲುಗಳನ್ನ ನೆಲಸಮ ಮಾಡಿ ಅಮಾನವೀಯ ಕೃತ್ಯವೆಸಗಿದ್ದರು. ಇಂದು ಜಿಲ್ಲೆಗೆ ಬಂದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಕಾಲಿಗೆ ಬಿದ್ದು ಅಂಗಲಾಚಿ ಬೇಡಿಕೊಂಡಳು. ಇದರಿಂದ ಅಸಮಧಾನಗೊಂಡ ಮಹಿಳೆಗೆ ಸಾಂತ್ವನ ಹೇಳಿ ಕೂಡಲೇ ಗರ್ಭಿಣಿ ವಾಸಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸಚಿವ ಸವದಿ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್ಗೆ ಸೂಚಿಸಿದರು.
ಅಧಿಕಾರಿಗಳಿಂದ ಗುಡಿಸಲು ನೆಲಸಮ- ಸಚಿವರ ಕಾಲಿಗೆ ಬಿದ್ದ ಗರ್ಭಿಣಿ
Please follow and like us: