ಅಧಿಕಾರ ಸ್ವೀಕರಿಸಿದಾಗ ನಾವು ಉತ್ತಮ ಗುಣಮಟ್ಟದ ಕಾರ್ಯ ಮಾಡಬೇಕು ಆಗ ನಾವು ಸಮಾಜದಲ್ಲಿ ನಮ್ಮ ತನ ತಾನಾಗಿಯೆ ಹೆಚ್ಚಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾತನಾಡಿದ ಅವರು, ನೂತನ ಅಧ್ಯಕ್ಷರಾಗಿ ಬಂದ ಪ್ರಸನ್ನ ಕುಮಾರ್ರವರಿಗೆ ಅಭಿನಂದಿಸಿದರು. ಈ ವೇಳೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ರವಿನಾಕಲಗೊಡು ಮಾತನಾಡಿ ಅಧಿಕಾರಕೊಸ್ಕರ ನಾವು ಯಾವತ್ತೂ ಇರಬಾರದು ನಮ್ಮ ಚಟುವಟಿಕೆ ಸದಾ ಇರಲಿ ಅಧ್ಯಕ್ಷರ ಹುದ್ದೆ ಮುಳ್ಳಿನ ಆವಿಗೆ ಇದ್ದಂತೆ ಆದರಿಂದ ಎಲ್ಲರೂ ಒಂದೇ ಎನ್ನುವ ಹಾಗೆ ನೆಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ವೇಳೆ ನೂತನÀ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ೨೭ ವಷದ ಸುದೀರ್ಘ ಸೇವೆ ಫಲ ನನಗೆ ಈ ಸ್ಥಾನ ದೊರಕಿದೆ. ನಾನು ಉತ್ತಮ ಕೆಲಸ ಮಾಡಲು ಎಲ್ಲರನ್ನು ವಿಶ್ವಾಸ ಪಡೆದು ಕೆಲಸ ಮಾಡುವೇ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಮದನ್ಗೌಡ. ಕಾರ್ಯದರ್ಶಿ ಸುರೇಶ್ ಮಾಜಿ ಅಧ್ಯಕ್ಷ ಕೆಂಚೆಗೌಡ.ರಾಜೇಗೌಡ ವೆಂಕಟೇಶಮೂರ್ತಿ,ಮAಜುನಾಥ್, ರಾಜೇಶ್ ಪ್ರಮೋದ್ ಇತರರು ಹಾಜರಿದ್ದರು.
ಅಧಿಕಾರ ಸ್ವೀಕರಿಸಿದಾಗ ಉತ್ತಮ ಕಾರ್ಯ ಮಾಡಬೇಕು
Please follow and like us: