ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಮಹಿಳೆಯನ್ನ ಬರ್ಬರವಾಗಿ ಹತ್ಯೆ ನಡೆಸಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಶಾಂತಮ್ಮ ಅಂತ ಗುರುತಿಸಲಾಗಿದೆ..ನಿನ್ನೆ ತಡರಾತ್ರಿ ಚಂದ್ರಾಲೇಔಟ್ ವ್ಯಾಪ್ತಿಯ ವಿನಾಯಕ ಲೇಔಟ್ ನಲ್ಲಿ ಘಟನೆ ನಡೆದಿದೆ..ಚತ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಮ್ಮ ಧನು ಎಂಬಾತನನ್ನ ಮದ್ವೆಯಾಗಿದ್ದು,ಇಬ್ಬರು ಮಕ್ಕಳು ಕೂಡ ಇದ್ರು..ಇತ್ತಿಚೆಗೆ ವಿನಾಯಕ ಲೇಔಟ್ ನಲ್ಲಿ ವಡಿವೇಲು ಎಂಬಾತನ ಜೊತೆ ಶಾಂತಮ್ಮ ವಾಸವಿದ್ರು..ನಿನ್ನೆ ಮನೆಯಲ್ಲಿ ಶಾಂತಮ್ಮ ಹಾಗೂ ವಡಿವೇಲು ಇದ್ದಾಗ ಧನು ಎಂಟ್ರಿಯಾಗಿದ್ದ,.ಮೂವರು ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ..ಈ ವೇಳೆ ಶಾಂತಮ್ಮಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ..ಸದ್ಯ ಧನು,ವಡಿವೇಲು ಹಾಗೂ ವಡಿವೇಲು ಸಂಬಂಧಿ ನರಸಿಂಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..