ಅಮರ್ ಆಳ್ವಾ ಪಾತ್ರದಲ್ಲಿ ರಿಷಬ್ ಶೆಟ್ಟಿ

ಕಿರಿಕ್ ಪರ‍್ಟಿ’, ‘ರಿಕ್ಕಿ’, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾಗಳಿಗೆ ನರ‍್ದೇಶನ ಮಾಡಿ ಗುರುತಿಸಿಕೊಂಡ ರಿಷಬ್ ಶೆಟ್ಟಿ, ‘ಬೆಲ್ ಬಾಟಂ’ ಸಿನಿಮಾ ಮೂಲಕ ಹೀರೋ ಆಗಿಯೂ ಬಡ್ತಿ ಪಡೆದರು. ಆ ಬಳಿಕ ಅವರಿಗೆ ನಟನೆಯ ಅವಕಾಶ ಹೇರಳವಾಗಿ ಸಿಗುತ್ತಿದ್ದು, ಈಗ ಹೊಸ ಪ್ರಾಜೆಕ್ಟ್ವೊಂದಕ್ಕೆ ಕೈ ಹಾಕಿದ್ದಾರೆ.  ಡಾನ್ ಅಮರ್ ಆಳ್ವಾ ಪಾತ್ರಕ್ಕೆ ರಿಷಬ್ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ರಿಷಬ್ ಜೊತೆ ಸಹ-ನರ‍್ದೆಶಕನಾಗಿ ಕೆಲಸ ಮಾಡಿರುವ ನಿತೇಶ್ ಈ ಚಿತ್ರಕ್ಕೆ ನರ‍್ದೇಶನ ಮಾಡಲಿದ್ದಾರೆ. ಇದು ಅವರ ಮೊದಲ ಆ್ಯಕ್ಷನ್-ಕಟ್ ಪ್ರಯತ್ನವಾಗಿರಲಿದೆ. ನಿತೇಶ್ ಮತ್ತು ರಿಷಬ್ ಜೊತೆಯಾಗಿ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರಂತೆ.
ಮಂಗಳೂರು ಭೂಗತ ಲೋಕದಲ್ಲಿ ಅಮರ್ ಆಳ್ವಾ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಎಂ.ಪಿ. ಜಯರಾಜ್, ಮುತ್ತಪ್ಪ ರೈ, ಆಯಿಲ್ ಕುಮಾರ್ ರೀತಿಯೇ ಅಂರ‍್ವರ‍್ಲ್ಡ್ನಲ್ಲಿ ಅಮರ್ ಆಳ್ವಾ ಹವಾ ಕೂಡ ಜೋರಾಗಿತ್ತು. ೧೯೯೨ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು. ಈ ಎಲ್ಲ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಲಿದೆ. ಯಾರು ನರ‍್ಮಾಣ ಮಾಡಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಯಾವಾಗ ಅಧಿಕೃತವಾಗಿ ಅನೌನ್ಸ್ ಆಗಬಹುದು ಎಂಬ ಕುತೂಹಲವೂ ಕೂಡಾ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಕದ್ದವನ ಪ್ರಾಮಾಣಿಕತೆ ಮೆಚ್ಚಲೇ  ಬೇಕು ….

Mon Jun 1 , 2020
ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ ಮಧ್ಯೆ ತಮಿಳುನಾಡಿನ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದಾರೆ. ಕೊಯಮತ್ತೂರಿನ ಟೀ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಹೆಂಡತಿ, ಮಕ್ಕಳನ್ನು ಮನೆಗೆ ತಲುಪಿಸಲು ಬೈಕ್ ಕದ್ದಿದ್ದಾನೆ. ಎರಡು ವಾರಗಳ ನಂತ್ರ ಬೈಕ್ ಪಾರ್ಸಲ್ ಮಾಡಿದ್ದಾನೆ. ವ್ಯಕ್ತಿ ಉದ್ಯಮಿಯೊಬ್ಬರ ಬೈಕ್ ಕದ್ದಿದ್ದ. ಪಾರ್ಸಲ್ ಕಂಪನಿ […]

Advertisement

Wordpress Social Share Plugin powered by Ultimatelysocial