ಅಳಲು ತೋಡಿಕೊಂಡ ಪೌರ ಕಾರ್ಮಿಕರು

ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಮಧ್ಯೆ ನಗರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ಪರಿಸ್ಥಿತಿ ಹೇಳತೀರದ್ದಾಗಿದೆ. ಈಗಾಗಲೇ ಅನೇಕ ಪೌರ ಕಾರ್ಮಿಕರಿಗೆ ಕೊರೊನಾ ವಕ್ಕರಿಸಿದೆ. ಇನ್ನು ಈ ಹಿಂದೆ ಅರ್ಧದಿನ ಕೆಲಸ ಮಾಡಿಸುತ್ತಿದ್ದ ಇಲಾಖೆ, ಇದೀಗ ಇಡೀ ದಿನ ಕೆಲಸ ಮಾಡಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೊರೊನಾದಿಂದ ಭೀತಿಗೊಳಗಾದ ಕಾರ್ಮಿಕರು, ನಮಗೆ ಅರ್ಧ ದಿನ ಕೆಲಸ ಮಾಡಲು ಅವಕಾಶ ಕೊಡಿ, ಇಡೀ ದಿನ ಬೇಡ ಎಂದು ಮನವಿ ಮಾಡಿದ್ದಾರೆ. ಅಳಲು ತೋಡಿಕೊಂಡ ಪೌರ ಕಾರ್ಮಿಕರು ಲಾಕ್‌ಡೌನ್ ಇದ್ದಾಗ ಬೆಳಗ್ಗೆ ೬ರಿಂದ ೧೦ರವರೆಗೆ ಕೆಲಸ ಇರುತ್ತಿತ್ತು. ಇದೀಗ ಮಧ್ಯಾಹ್ನ ೨ರವರೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮನೆಗಳಲ್ಲೂ ಪುಟ್ಟ ಮಕ್ಕಳಿದ್ದಾರೆ. ಯಾರಿಗೆ ಏನಾಗುತ್ತದೆ ಎಂದು ತಿಳಿಯದ ಸ್ಥಿತಿ ಬಂದಿದೆ. ನೀರು ಕೇಳಿದರೂ ಕೊಡುತ್ತಿಲ್ಲ. ಇಂದಿರಾ ಕ್ಯಾಂಟೀನ್ ಊಟವನ್ನು ಬಿಸಾಡಿ ಹೋಗುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ನಡುಕ ಹುಟ್ಟಿಸುತ್ತೆ- ಉಗ್ರಪ್ಪ

Mon Jul 6 , 2020
ಕೊರೊನಾ ಪರಿಸ್ಥಿತಿ ನೆನಸಿಕೊಂಡ್ರೆ ಬಹಳ ದುಗುಡ, ನಡುಕ ಹುಟ್ಟಿಸುತ್ತಿದೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ ಭಾರತ ೧೧ ನೇ ಸ್ಥಾನದಲ್ಲಿ ಇತ್ತು , ಈಗ ೩ ನೇ ಸ್ಥಾನಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆ ದಂತ ಗೋಪುರ ಬಿಟ್ಟು ಹೊರಗಡೆ ಬರುತ್ತಿಲ್ಲ. ಸಿಎಂ ಯಡಿಯೂರಪ್ಪ ಅವರು ಕೃಷ್ಣಾ ಬಿಟ್ಟು ಹೊರಗಡೆ ಬರುತ್ತಿಲ್ಲ. ರೋಗಕ್ಕೆ ತುತ್ತಾದವರನ್ನು ಸಂತೈಸುವ ಕೆಲಸ […]

Advertisement

Wordpress Social Share Plugin powered by Ultimatelysocial