ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದೆ. ಈ ಮಧ್ಯೆ ನಗರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ಪರಿಸ್ಥಿತಿ ಹೇಳತೀರದ್ದಾಗಿದೆ. ಈಗಾಗಲೇ ಅನೇಕ ಪೌರ ಕಾರ್ಮಿಕರಿಗೆ ಕೊರೊನಾ ವಕ್ಕರಿಸಿದೆ. ಇನ್ನು ಈ ಹಿಂದೆ ಅರ್ಧದಿನ ಕೆಲಸ ಮಾಡಿಸುತ್ತಿದ್ದ ಇಲಾಖೆ, ಇದೀಗ ಇಡೀ ದಿನ ಕೆಲಸ ಮಾಡಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೊರೊನಾದಿಂದ ಭೀತಿಗೊಳಗಾದ ಕಾರ್ಮಿಕರು, ನಮಗೆ ಅರ್ಧ ದಿನ ಕೆಲಸ ಮಾಡಲು ಅವಕಾಶ ಕೊಡಿ, ಇಡೀ ದಿನ ಬೇಡ ಎಂದು ಮನವಿ ಮಾಡಿದ್ದಾರೆ. ಅಳಲು ತೋಡಿಕೊಂಡ ಪೌರ ಕಾರ್ಮಿಕರು ಲಾಕ್ಡೌನ್ ಇದ್ದಾಗ ಬೆಳಗ್ಗೆ ೬ರಿಂದ ೧೦ರವರೆಗೆ ಕೆಲಸ ಇರುತ್ತಿತ್ತು. ಇದೀಗ ಮಧ್ಯಾಹ್ನ ೨ರವರೆಗೆ ಕೆಲಸ ಮಾಡುತ್ತಿದ್ದೇವೆ. ನಮ್ಮ ಮನೆಗಳಲ್ಲೂ ಪುಟ್ಟ ಮಕ್ಕಳಿದ್ದಾರೆ. ಯಾರಿಗೆ ಏನಾಗುತ್ತದೆ ಎಂದು ತಿಳಿಯದ ಸ್ಥಿತಿ ಬಂದಿದೆ. ನೀರು ಕೇಳಿದರೂ ಕೊಡುತ್ತಿಲ್ಲ. ಇಂದಿರಾ ಕ್ಯಾಂಟೀನ್ ಊಟವನ್ನು ಬಿಸಾಡಿ ಹೋಗುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅಳಲು ತೋಡಿಕೊಂಡ ಪೌರ ಕಾರ್ಮಿಕರು
Please follow and like us: