ಗಂಟೆಗಟ್ಟಲೆ ಆಂಬ್ಯುಲೆನ್ಸ್ ಗೆ ಕಾದು ಮನೆ ಮುಂದೆ ರಸ್ತೆಯಲ್ಲಿ ಕೋವಿಡ್-೧೯ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕ್ಷಮೆ ಕೇಳಿದ್ದಾರೆ.ಘಟನೆ ಬಳಿಕ ಕುಟುಂಬಸ್ಥರನ್ನು ಭೇಟಿ ಮಾಡಿದ ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್, ಪಾಲಿಕೆ ಪರವಾಗಿ ಕ್ಷಮೆಯಾಚಿಸಿದ್ದಾರೆ.ಅವರು ಮಾಡಿರುವ ಟ್ವೀಟ್ ನಲ್ಲಿ ಕುಟುಂಬ ಸದಸ್ಯರ ಬಳಿ ಕ್ಷಮೆಯಾಚುತ್ತಿರುವ ದೃಶ್ಯ ಕಂಡುಬರುತ್ತಿದೆ. ಕೊರೋನಾ ರೋಗಿಗಳನ್ನು ಮತ್ತು ಅವರ ಮನೆಯವರನ್ನು ಕಳಂಕಿತರAತೆ ಕಾಣಬೇಡಿ ಎಂದು ಸಹ ಟ್ವೀಟ್ ಮಾಡಿದ್ದಾರೆ.
ಆಂಬ್ಯುಲೆನ್ಸ್ಗೆ ಕಾದು ಕೋವಿಡ್-೧೯ನಿಂದ ರೋಗಿ ಮೃತ
Please follow and like us: