ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು:ಶ್ರೀರಾಮುಲು

ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ. ಜೀವದ ಹಂಗು ತೊರೆದು ಜನರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯಪಟ್ಟರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಪೊಲೀಸರು, ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪತ್ರಕರ್ತರು ಫ್ರೆಂಟ್ಲೈನ್ ವಾರಿಯರ್ಸ್ ಆಗಿದ್ದಾರೆ.  ಎಂಎಲ್ಸಿ ಶ್ರೀಕಂಠೇಗೌಡರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಕೊರೊನಾ ಜಾಗೃತಿಯಲ್ಲಿ ಪತ್ರಕರ್ತರ ಕಾರ್ಯ ಮಹತ್ವದ್ದಾಗಿದೆ. ರಾಜ್ಯದಲ್ಲಿ ಕಡಿಮೆ ಸಂಖ್ಯೆಯ ಕೊರೊನಾ ಪಾಸಿಟಿವ್ ಬರಲು ಪತ್ರಕರ್ತರು ಕೂಡ ಕಾರಣ. ಇನ್ನೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಝೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ಸಿದ್ದರಾಮಯ್ಯನವರು ಗ್ರೀನ್ ಝೋನ್ನಲ್ಲಿರುವ ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಮಾಡಿಕೊಡಿ ಎಂದಿದ್ದಾರೆ. ಆದರೆ, ಆರ್ಥಿಕ ನಷ್ಟವಾದರೂ ಪರವಾಗಿಲ್ಲ ಜೀವಹಾನಿ ಆಗಕೂಡದು. ಲಾಕ್ಡೌನ್ ವೇಳೆಯ ಆರ್ಥಿಕ ನಷ್ಟ ತಡೆಯುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಪ್ರಭಾಸ್‌ಗೆ ಜೋಡಿಯಾಗಿ ಕಿಯಾರಾ

Wed Apr 29 , 2020
ತೆಲುಗು, ತಮಿಳಿನಲ್ಲಿ ತೆರೆಕಂಡ ಮಹಾನಟಿ ಎಂಬ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ. ಆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈಗ ಬಾಹುಬಲಿ ಖ್ಯಾತಿಯ ಪ್ರಭಾಸ್ ಅವರ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಪ್ರಭಾಸ್ ಸದ್ಯಕ್ಕೆ ರಾಧಾ ಕೃಷ್ಣಕುಮಾರ್ ನಿರ್ದೇಶನದ ಪ್ರಭಾಸ್ ೨೦ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ಶೂಟಿಂಗ್ ಸ್ಥಗಿತಗೊಂಡಿರುವ ಹಿನ್ನಲೆ ಇದರ ಶೀರ್ಷಿಕೆ ಇನ್ನು ಅಂತಿಮಗೊAಡಿಲ್ಲ. ಇದಾದ ಬಳಿಕ ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್‌ನಡಿ […]

Advertisement

Wordpress Social Share Plugin powered by Ultimatelysocial