ರಾಯಚೂರು ಜಿಲ್ಲಾ ಸಿರವಾರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ಕುಟುಂಬದ ಬಾಣಂತಿಯರ ಹೆರಿಗೆಗೆ ಹಣ ವಸೂಲಿ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು. ಒಂದು ತಿಂಗಳಿನಲ್ಲಿ 60-80 ಹೆರಿಗೆ ಪ್ರತಿಯೊಬ್ಬರಿಂದ 1000-2000 ರೂಗಳು ವಸೂಲಿ ಮಾಡುತ್ತಿರುವ ಸ್ಟಾಫ್ ನರ್ಸ್, ನೀವು ಕೊಡುವ ಮೊತ್ತ ಚಹಾ ಕುಡಿಯಲು ಸಹ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ನೇರವಾಗಿ ಇಲ್ಲಿನ ಸ್ಟಾಫ್ ನರ್ಸ್ ಹೇಳ್ತಾರೆ, ಹೆರಿಗೆ ಸಮಯದಲ್ಲಿ ವೈದ್ಯರು ಇರುವುದಿಲ್ಲ ನರ್ಸ್ ಗಳು ನೇರವಾಗಿ ಜನರ ರಕ್ತ ಹೀರುತ್ತಿದ್ದಾರೆ. ಇಲ್ಲಿನ ಸ್ಟಾಫ್ ನರ್ಸ್ ಗಳನ್ನ ಕೊಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇವರನ್ನು ಅಮಾನತು ಮಾಡಬೇಕೆಂದು ಡಿ ವೈ ಎಫ್ ಐ ಮುಖಂಡ ಚಂದ್ರು ಅವರು ಒತ್ತಾಯಿಸಿದ್ದಾರೆ.
ಆಸ್ಪತ್ರೆನಾ ಇಲ್ಲ ಹಣ ವಸೂಲಿ ಮಾಡುವ ದಂದೆ ಕೇಂದ್ರನಾ ?
Please follow and like us: