ತಿರುವನಂತಪುರಂ: ತೀವ್ರ ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯನ್ನ ಇಂಗ್ಲೆಂಡ್ನಿಂದ ಏರ್ಲಿಫ್ಟ್ ಮಾಡಿ ಕೇರಳಕ್ಕೆ ಕರೆತರುವಲ್ಲಿ ವಾಟ್ಸ್ಯಾಪ್ ಗ್ರೂಪ್ವೊಂದು ನೆರವಾಗಿದೆ. ಕೊರೊನಾದಿಂದ ಭಾರತದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದಿದ್ದರಿಂದ ಈ ವಾಟ್ಸ್ಯಾಪ್ ಗ್ರೂಪ್ನ ಸಹಾಯದಿಂದ ರೋಗಿಯೊಬ್ರು ದೇಶಕ್ಕೆ ವಾಪಸ್ ಆಗಲು ಅನುಕೂಲವಾಗಿದೆ. ಕೇರಳಿಗರನ್ನೊಳಗೊಂಡ ದೆಹಲಿ ಮೂಲದ ಈ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ಕೂಡ ಇದ್ದರು. ೫೦ ದಿನಗಳ ಹಿಂದೆ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ ಹೆಸರಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ ರಚಿಸಲಾಗಿತ್ತು. ಕುರಿಯನ್ ಜೋಸೆಫ್ ಅವರು ಇದರ ನೇತೃತ್ವ ವಹಿಸಿದ್ದರು. ಈ ಗುಂಪಿನ ಸಹಾಯದಿಂದ, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಐಟಿ ಉದ್ಯೋಗಿಯನ್ನು ಕಳೆದ ಶುಕ್ರವಾರ ಇಂಗ್ಲೆಂಡ್ ಆಸ್ಪತ್ರೆಯಿಂದ ಕೊಜಿಕ್ಕೋಡ್ಗೆ ಏರ್ ಆ್ಯಂಬುಲೆನ್ಸ್ ಮೂಲಕ ಕರೆತರಲಾಗಿದೆ.
ಇಂಗ್ಲೆಂಡ್ನಿಂದ ಕೇರಳಕ್ಕೆ ರೋಗಿಯ ಏರ್ಲಿಫ್ಟ್
Please follow and like us: