ಇನ್ಮುಂದೆ ಪೊಲೀಸರು ತಮ್ಮ ವಾಟ್ಸಾಪ್ ಡಿಪಿಗೆ ಪೋಟೊ ಹಾಕುವಂತಿಲ್ಲ.
ಮೊಬೈಲ್ ಗೆ ಕಾಲ್ ಬಂದು ರಿಸೀವ್ ಮಾಡಿಲ್ಲ ಅಂದ್ರೂ ಉಂಟಾಗಲಿದೆ ಸಂಕಷ್ಟ.
ಬೆಂಗಳೂರು ಆಗ್ನೇಯ ವಿಭಾಗದಲ್ಲಿ ವಿನೂತನ ಪ್ರಯತ್ನ.
ಹಾಗಿದ್ರೆ ಈ ವ್ಯಾಟ್ಸಾಪ್ ಡಿಪಿಗೂ, ಫೋನ್ ರಿಸೀವ್ ಮಾಡದೆ ಇರೋದಿಕ್ಕೂ ಏನ್ ಸಂಬಂಧ.
ಬೆಂಗಳೂರು ಆಗ್ನೇಯ ಪೊಲೀಸರಿಗೆ ಹೀಗೊಂದು ಖಡಕ್ ಸೂಚನೆ.
ವಾಟ್ಸಪ್ ಡಿಪಿಗೆ ಪೋಟೊ ಸೇರಿದಂತೆ ಯಾವುದೇ ಪಿಕ್ಚರ್ ಹಾಕುವಂತಿಲ್ಲ.
ಸಿಲಿಕಾನ್ ಸಿಟಿ ಪೊಲೀಸರಿಗೆ ನಾಳೆಯಿಂದ ಹೊಸ ರೂಲ್ಸ್.
ನಾಳೆಯಿಂದ ವಾಟ್ಸಪ್ ಡಿಪಿಗೆ ಪೋಟೋ ಹಾಕಿದ್ರೆ ಕಠಿಣ ಕ್ರಮ.
ನಗರದ ಆಗ್ನೇಯ ವಿಭಾಗದಲ್ಲಿ ಜಾರಿಯಾಗ್ತಿದೆ ಹೊಸ ರೂಲ್ಸ್.
ಆಗ್ನೇಯ ವಿಭಾಗ ಡಿಸಿಪಿ ಸಿ ಕೆ ಬಾಬಾರಿಂದ ಹೊಸ ಪ್ರಯೋಗ.
ಆಗ್ನೇಯ ವಿಭಾಗದ ಎಲ್ಲಾ ಪೊಲೀಸ್ ಆಫೀಸರ್ ಗಳಿಗೆ ಸೂಚನೆ.
ವಾಟ್ಸಪ್ ಡಿಪಿಗಳಿಗೆ ಪೋಟೊ ಹಾಕದಂತೆ ಡಿಸಿಪಿ ಖಡಕ್ ಸೂಚನೆ.
ಹಾಗಾದ್ರೆ ಡಿಸಿಪಿ ಸಿ.ಕೆ.ಬಾಬಾ ಇಂತಹ ಸೂಚನೆ ಕೊಟ್ಟಿದ್ದಾದ್ರು ಯಾಕೆ ಗೊತ್ತಾ.!
ಸಿ.ಕೆ.ಬಾಬಾ ಸೂಚನೆ ಹಿಂದಿದೆ ಮತ್ತೊಂದು ಪ್ಲಾನ್.
ಇನ್ಮುಂದೆ ಎಲ್ಲ ಪೊಲೀಸರು ಲೋಕಸ್ಪಂದನ ಎಂಬ ಕ್ಯೂ ಆರ್ ಕೋಡ್ ಹಾಕಬೇಕು.
ಲೋಕ ಸ್ಪಂದನ ಕ್ಯೂ ಆರ್ ಕೋಡನ್ನ ಪ್ರತಿಯೊಬ್ಬರ ಮೊಬೈಲ್ ವಾಟ್ಸಪ್ ಡಿಪಿಗೆ ಹಾಕಬೇಕು.
ಕ್ಯೂ ಆರ್ ಕೋಡ್ ಬಿಟ್ಟು ಯಾವುದೇ ಪೋಟೋಗಳನ್ನು ಹಾಕೋ ಹಾಗಿಲ್ಲ.
ಲೋಕಸ್ಪಂದನ ಕ್ಯೂ ಆರ್ ಕೋಡ್ ನಿಂದ ಏನ್ ಪ್ರಯೋಜನ.!
ಪೊಲೀಸ್ ಆಫೀಸರ್ ಗಳು ಫೋನ್ ಕಾಲ್ ರೀಸಿವ್ ಮಾಡಿಲ್ಲ ಅಂದ್ರೆ ಸಾರ್ವಜನಿಕರು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು.
ಲೋಕಸ್ಪಂದನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಮೇಸೆಜ್ ಮಾಡಬಹುದು.
ನಿಮ್ಮ ಅಧಿಕಾರಿ ಪೋನ್ ರೀಸಿವ್ ಮಾಡುತ್ತಿಲ್ಲ ಅಂತಾ ಸ್ಕ್ಯಾನ್ ಮಾಡಿ ಮೇಸೆಜ್ ಮಾಡಿದ್ರೆ, ಸೀದಾ ಡಿಸಿಪಿ ಮೊಬೈಲ್ ಗೆ ಬರುತ್ತೆ ಮೆಸೇಜ್.
ಡಿಸಿಪಿ ಮೊಬೈಲ್ ಗೆ ಯಾವ ಅಧಿಕಾರಿ ಕಾಲ್ ರಿಸೀವ್ ಮಾಡಿಲ್ಲ ಅನ್ನೋ ಮೆಸೇಜ್ ರವಾನೆ.
ಇದರಿಂದ ಯಾವ ಅಧಿಕಾರಿ ಜನರಿಗೆ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನ ಪತ್ತೆ ಹಚ್ಚಿ ಅವರ ಮೇಲೆ ಕ್ರಮ.
ಲೋಕಸ್ಪಂದನ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೊಸ ಯೋಜನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada