ಈ ವಿದ್ಯಾರ್ಥಿಯ ಸಾಧನೆ ಇತರರಿಗೂ ಮಾದರಿಯಾಗಲಿ

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ಹನುಮಂತರಾಯ ಅವರ ಮಗ ಸಿದ್ದರಾಮಯ್ಯ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 92.66% ರಷ್ಟು  ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಕಲಾ ವಿಭಾಗದಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆದು ದೇವದುರ್ಗ ತಾಲ್ಲೂಕಿಗೆ 2ನೇ ಸ್ನಾನ ಗಳಿಸಿ ಸಾಧನೆ ಮಾಡಿದ್ದಾರೆ. ಉತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗಂಡುಗಲಿ ಕುಮಾರರಾಮ ಜನ ಕಲ್ಯಾಣ ಸಮಿತಿಯ ಮುಖಂಡರಿಂದ ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ಸಂಘದ ಮುಖಂಡರು, ಸಿದ್ದರಾಮಯ್ಯನ ಸಾಧನೆ ನಮ್ಮೂರಿಗೆ ಮಾತ್ರವಲ್ಲ ತಾಲ್ಲೂಕು ಮತ್ತು ಜಿಲ್ಲೆಗೆ ಮಾದರಿಯಾಗಿದೆ. ಈ ವಿದ್ಯಾರ್ಥಿಯ ಸಾಧನೆ ಇತರರಿಗೂ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ. ಸಿದ್ದರಾಮಯ್ಯ ನಮ್ಮೂರಿನ ಕೀರ್ತಿ ಹೆಚ್ಚಿಸಲಿ, ಈತನ ಸಾಧನೆ ಊರಿನ ಜನರು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಮಹತ್ವದ ಘಟ್ಟ ತಲುಪಿದ ರಾಜಸ್ಥಾನ ರಾಜಕೀಯ

Sun Jul 19 , 2020
ರಾಜಸ್ಥಾನ ರಾಜಕೀಯ ಪ್ರಹಸನ ಮಹತ್ವದ ಘಟ್ಟ ತುಲುಪಿದ್ದು. ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷ ತೂರೆಯವುದು ಬಹುತೇಕ ನಿಶ್ಚಯವಾಗಿರುವ ಹಾಗೆ ಭಾಸವಾದುತ್ತಿದೆ. ಪೈಲೆಟ್ ಹಾಗೂ ಅವರ ಬೆಂಬಲಿಗರು ಅಶೋಕ್ ಗೆಹ್ಲೋಟ್ ನಾಯಕ್ವತದ ಬಗ್ಗೆ ಚಕಾರ ಎತ್ತುತ್ತಲ್ಲೆ ಬಂದಿದ್ದಾರೆ. ಯಾವ ಕಾಂಗ್ರೆಸ್ ನಾಯಕರ ಮಾತಿಗೆ ಬಗ್ಗದೆ ತಮ್ಮದೆ ದಾರಿ ನೋಡಿಕೊಂಡ ಹಾಗೆ ಕಾಣುತ್ತಿದೆ. ಎಲ್ಲಾ ಪ್ರಹಸನದ ಮದ್ಯಯು ಪ್ರಸುತ್ತ ಮುಖ್ಯ ಮಂತ್ರಿ ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಪಡಿಸಲು ಸಿದ್ದರಾಗಿದ್ದಾರೆ. ತಮಗೆ ೧೦೯ […]

Advertisement

Wordpress Social Share Plugin powered by Ultimatelysocial