ಎರಡು ದಿನ ಲಾಕ್ಡೌನ್ ಅಗತ್ಯ ಇಲ್ಲ

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿದ ಕೃಷಿ ಸಚಿವ ಬಿ ಸಿ ಪಾಟೀಲ್ ಕೃಷಿ ವಿವಿ ವಿದ್ಯಾರ್ಥಿಗಳ ಅಂತಿಮ‌ ಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ಪಿಹೆಚ್ ಡಿ, ಎಂಎಸ್ ಸಿ, ಪರೀಕ್ಷೆಗಳು ಆಗಸ್ಟ್ ವರೆಗೂ ಇಲ್ಲ ಎಂದು ಹೇಳಿದ್ದಾರೆ. ಹಾಗೂ ಕೊಪ್ಪಳಕ್ಕೆ ಹೊರರಾಜ್ಯ,ಜಿಲ್ಲೆಯಿಂದ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ್ದೇವೆ. ಕೊಪ್ಪಳಕ್ಕೆ ಬರೋರು ಮೊದಲು ಕೊರೋನಾ ಟೆಸ್ಟ್ ಗೆ ಒಳಗಾಗಬೇಕು ಟೆಸ್ಟ್ ರಿಸಲ್ಟ್ ಬರೋವರೆಗೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕು. ವರದಿ ನೆಗೆಟಿವ್ ಬಂದ ನಂತರವೇ ಅವರನ್ನು ಊರೊಳೊಗೆ ಕಳುಹಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ‌ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ. ಅಲ್ಲದೇ ಅಂತರ್ ರಾಜ್ಯ ಗಡಿ ಬಂದ್ ಬಗ್ಗೆ ಚರ್ಚೆ ಆಗಿಲ್ಲ. ನನ್ನ ಪ್ರಕಾರ ಲಾಕ್‌ಡೌನ್ ಕೊರೋನಾ ನಿಯಂತ್ರಣಕ್ಕೆ ‌ಪರಿಹಾರ ಅಲ್ಲ. ಜನರು ಎಚ್ಚೆತ್ತುಕೊಂಡಿದ್ದಾರೆ ಜನರೇ ಸೆಲ್ಫ್ ಲಾಕ್‌ಡೌನ್ ಮಾಡಿಕೊಳ್ತಿದ್ದಾರೆ. ಎರಡು ದಿನ ಲಾಕ್‌ಡೌನ್ ಅಗತ್ಯ ಇಲ್ಲ ಒಂದೇ ದಿನ ಸಂಡೇ ಲಾಕ್‌ಡೌನ್ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ತೊಂದರೆಗೀಡಾದ ಜನತೆ

Sat Jul 11 , 2020
ಕೊರೊನಾ ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರುವ ಸಂಬಂಧ ಬಡವರು ಹಾಗು ನಿರ್ಗತಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹವರಿಗೆ ಸಹಾಯ ಹಸ್ತ ಚಾಚುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ ಎಂದು ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಆಟೋ ಚಾಲಕರಿಗೆ ಮತ್ತು ಬಡವರಿಗೆ ಆಹಾರದ ದಿನಸಿ ಕಿಟ್ ಗಳನ್ನು ವಿತರಿಸಿದರು. ನಂತರ  ಮಾತನಾಡಿದ ಅವರು ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು […]

Advertisement

Wordpress Social Share Plugin powered by Ultimatelysocial