ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಆತಂಕ ತಂದಿದೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳಲ್ಲಿ ಶೇ ೯೦ಕ್ಕೂ ಹೆಚ್ಚು ಮಂದಿಯಲ್ಲಿ ರೋಗದ ಲಕ್ಷಣಗಳೇ ಕಾಣಿಸುತ್ತಿಲ್ಲ. ಆದರೆ ತೀವ್ರತರವಾದ ದುಷ್ಪರಿಣಾಮ ಬೀರದೇ ಇರುವುದೇ ಸದ್ಯಕ್ಕೆ ಸಮಾಧಾನಕರವಾದ ವಿಚಾರವಾಗಿದೆ. ಹಿರಿಯರನ್ನು ಈ ಸಮಯದಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ರಾಜ್ಯ ರ್ಕಾರದಿಂದ ಕೆಲವು ಹೊಸ ಮರ್ಗಸೂಚಿಗಳನ್ನು ಕೊಡುತ್ತಿದ್ದೇವೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಕೊವಿಡ್ ಕೇರ್ ಸೆಂಟರ್ನ್ನು ತೆರೆಯಲಾಗುತ್ತಿದೆ. ಭಾರತ ಶಾಂತಿಯನ್ನು ಬಯಸುವ ದೇಶ. ನಾವಾಗಿ ಬೇರೆಯವರ ಮೇಲೆ ಹೋಗಿದ್ದು ಇತಿಹಾಸದಲ್ಲಿಲ್ಲ. ನಮ್ಮ ಗಡಿಭಾಗದಲ್ಲಿ ಭೂ ಆಕ್ರಮಣ ಮಾಡಿರುವುದು ಖಂಡನೀಯ. ಪ್ರಧಾನಿ ಮೋದಿ ದಿಟ್ಟ ನಾಯಕ. ಅವರು ಸ್ಪಷ್ಟ ಸಂದೇಶ ಕಳಿಸಿದ್ದಾರೆ. ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆ ಇಲ್ಲ. ಹುತಾತ್ಮರ ಕುಟುಂಬಗಳಿಗೆ ಭಗವಂತ ನೈತಿಕ ಸ್ಥೆöರ್ಯ ನೀಡಲಿ ಎಂದು ಹೇಳಿದರು.
ಒಂದಿಂಚು ಭೂಮಿಯನ್ನೂ ಬಿಡುವ ಪ್ರಶ್ನೆ ಇಲ್ಲ-ಸಚಿವ ಡಾ.ಕೆ. ಸುಧಾಕರ್
Please follow and like us: