ಒಂದು ಕೋಟಿ ರೂಪಾಯಿಯ ‘ಉದಯಾಸ್ತಮಾನ’ ಸೇವಾ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಹೈದರಾಬಾದ್‌: ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಂದು ಕೋಟಿ ರೂಪಾಯಿಯ ‘ಉದಯಾಸ್ತಮಾನ’ ಸೇವಾ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಅಭಿಷೇಕವನ್ನು ಒಳಗೊಂಡಂತೆ ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ ₹1.5 ಕೋಟಿ ದರವನ್ನು ಟಿಟಿಡಿ ನಿಗದಿಪಡಿಸಿದೆ.

ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನು ವೀಕ್ಷಿಸಲು, ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರಿಗೆ ಗರ್ಭಗುಡಿ ಮತ್ತು ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಈ ಟಿಕೆಟ್‌ ಅವಕಾಶ ನೀಡುತ್ತದೆ.

 

ಟಿಕೆಟ್ ಸಿಂಧುತ್ವದ ಅವಧಿ 25 ವರ್ಷಗಳು (ಪ್ರತಿ ವರ್ಷ ಒಂದು ನಿಗದಿತ ದಿನ) ಅಥವಾ ದಾನಿಗಳ ಜೀವಿತಾವಧಿಯಲ್ಲಿ ಯಾವುದು ಮೊದಲು ಬರುತ್ತದೆಯೇ ಅದು. ಕಂಪನಿ ಅಥವಾ ಸಂಸ್ಥೆಗಳಾಗಿದ್ದರೆ ಟಿಕೆಟ್‌ನ ಸಿಂಧುತ್ವದ ಅವಧಿ 20 ವರ್ಷಗಳಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾನ್ ಕಲಾವಿದೆ ಪಂಡರೀಬಾಯಿ ಜೀವನ ಚರಿತ್ರೆ!

Thu Feb 17 , 2022
1930ರ ವರ್ಷದಲ್ಲಿ ಜನಿಸಿದ ಪಂಡರೀಬಾಯಿಯವರು ಕನ್ನಡ, ತಮಿಳು, ತೆಲುಗು ಭಾಷೆಗಳ ಚಲನಚಿತ್ರ ಅಭಿಮಾನಿಗಳ ಹೃದಯದಲ್ಲಿ ತುಂಬಾ ತುಂಬಾ ಹತ್ತಿರವಾಗಿ ನಿಲ್ಲುವವರು. ತಾಯಿಗಿಂತ ಹೃದಯಕ್ಕೆ ಹತ್ತಿರರಾದವರು ಯಾರಿರಲು ಸಾಧ್ಯ! ನಾವು ಸಿನಿಮಾರಂಗದಲ್ಲಿ ಎಷ್ಟೆಷ್ಟೋ ತಾರೆಯರನ್ನು ನೋಡಿರುತ್ತೇವೆ. ಆದರೆ ಸಿನಿಮಾ ರಂಗದಲ್ಲಿನ ಶ್ರೇಷ್ಠ ತಾಯಿ ಮಾತ್ರ ಪಂಡರೀಬಾಯಿ. ವಿವೇಕಾನಂದರ ಒಂದು ಮಾತು ಆಗಾಗ ನೆನಪಾಗುತ್ತದೆ. ವಿದೇಶಿ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ಪ್ರಮುಖ ವೆತ್ಯಾಸವೆಂದರೆ ಹೆಣ್ಣನ್ನು ನೋಡುವ ದೃಷ್ಟಿ. ನಮ್ಮ ಭಾರತೀಯ ಹೃದಯಕ್ಕೆ […]

Advertisement

Wordpress Social Share Plugin powered by Ultimatelysocial