ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ, ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ :ಸಿ.ಸಿ. ಪಾಟೀಲ್

ಗದಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಂಟೈನ್ಮೆಂಟ್ ಏರಿಯಾ ಹೊರತುಪಡಿಸಿ ರಾಜ್ಯಾದ್ಯಂತ ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು,ಕೆಲವು ಇಲಾಖೆಯನ್ನು ಸಡಿಲಿಕೆ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ಇದರಲ್ಲಿ ಮರಳು ಗಣಿಗಾರಿಕೆಗೂ ಸಡಿಲಿಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಮಾಸ್ಕ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ, ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಂತು ಹೋದ ಸರ್ಕಾರಿ ಕಾಮಗಾರಿಗಳಿಗೆ ಮರಳು ಬೇಕಾಗಿದೆ. ಮಳೆ ಆರಂಭವಾದ್ರೆ ನೀರು ಬಂದು ಮರಳು ತೆಗೆಯುವುದು ಕಷ್ಟ. ಹಾಗಾಗಿ ಅಭಿವೃದ್ಧಿ ಕಾರ್ಯಕ್ಕಾಗಿ ಈ ನಿಯಮ ಜಾರಿಗೊಳಿಸಲಾಗಿದೆಯೇ ವಿನ: ಇಲ್ಲಿ ಯಾರ ಲಾಭಿಗೂ ಮಣೆ ಹಾಕಿಲ್ಲ. ಕೇಂದ್ರ ನಿಯಮ ಪ್ರಕಾರ ಸಡಿಲಿಕೆಗೊಳಿಸಲಾಗಿದೆ ಎಂದು ಹೇಳಿದರು.

 

 

Please follow and like us:

Leave a Reply

Your email address will not be published. Required fields are marked *

Next Post

ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು:ಡಿ ಕೆ ಶಿ

Sun Apr 26 , 2020
ಗೋಪಾಲಯ್ಯಗಿಂತ ಮೊದಲು ಮಂತ್ರಿ ಆಗಿದ್ದು, ನಾನು ಸರ್ಕಾರ ಹೇಗೆ ನಡೆಯುತ್ತದೆ? ವ್ಯವಸ್ಥೆ ಹೇಗಿರುತ್ತದೆ ಎನ್ನುವುದು ಚೆನ್ನಾಗಿ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ  ಅವರು,  ದಾಸ್ತಾನು ಇರಿಸಿದ್ದ ಅಕ್ಕಿ ಎನ್ನುವ ಗೋಪಾಲಯ್ಯ ಮೊದಲೇ ಏಕೆ ದಾಸ್ತಾನು ಇರಿಸಿದ್ದ ಬಗ್ಗೆ ಘೋಷಣೆ ಮಾಡಿಲ್ಲ. ನನಗೆ ಎಲ್ಲವೂ ಗೊತ್ತಿದೆ ಬಿಡಿ ಎಂದರು.ಇನ್ನೂ ಮಂಡ್ಯದಲ್ಲಿ ಶಾಸಕ ಶ್ರೀಕಂಠೇ ಗೌಡ ದಾದಾಗಿರಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು, ಸರಕಾರದವರು […]

Advertisement

Wordpress Social Share Plugin powered by Ultimatelysocial