ನಿನ್ನೆ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲುವಿನ ಕೇಕೆ ಹಾಕಿತು. ಶೇನ್ ವಾಟ್ಸನ್-ಡು ಪ್ಲೆಸಿಸ್ ಜೊತೆಯಾಟಕ್ಕೆ ಬ್ರೇಕ್ ಹಾಕುವಲ್ಲಿ ಎಡವಿದ ಪಂಜಾಬ್ ಬೌಲರ್ ಗಳು ಬಳಲಿ ಬಸವಳಿದರು. ಕೊಲ್ಲಿ ಕದನದಲ್ಲಿ ನಿನ್ನೆ ಪಂಜಾಬ್ ಗೆ ಸರಿಯಾಗಿಯೇ ಪಂಚ್ ಕೊಟ್ಟ ಸೂಪರ್ ಕಿಂಗ್ಸ್ ಗೆಲುವಿಗೆ ಹಳಿಗೆ ಮರಳಿತು..ಪಂದ್ಯದ ಬಳಿಕ ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಕನ್ನಡಿಗರಾದ ಕೆ.ಎಲ್.ರಾಹುಲ್ ಮತ್ತು ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ಗೆ ಬ್ಯಾಟಿಂಗ್ ಸಲಹೆ ನೀಡಿದ್ದಾರೆ.
ಕನ್ನಡಿಗರಿಗೆ ಉತ್ತಮ ಬ್ಯಾಟಿಂಗ್ ಕೌಶಲ್ಯ ಕೂಡ ಹೇಳಿ ಕೊಟ್ಟಿದ್ದಾರೆ. ಭಾರತದ ಭವಿಷ್ಯದ ಪ್ರತೀಕ ಎಂದೆನಿಸಿಕೊಂಡಿರುವ ರಾಹುಲ್-ಅಗರ್ವಾಲ್ ಅವರಿಗೆ ಧೋನಿ ಸೂಕ್ತ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಧೋನಿ ಕನ್ನಡಿಗರಿಗೆ ಸಲಹೆ ನೀಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.