ಕೊರೊನಾ ವೈರಸ್ ನ ಮಹಾಮಾರಿ ಹಾವಳಿ ನಡುವೆಯೇ ದೈತ್ಯ ಮಿಡತೆಗಳ ಕಾಟ ಕೋಲಾರಕ್ಕೂ ಕಾಲಿಟ್ಟಿದೆ ಹಾಗೂ ನಾಗ್ಪುರದಲ್ಲಿ ಮಿಡತೆಗಳ ಹಿಂಡು ಇರುವ ಬಗ್ಗೆ ಸರ್ಕಾರದಿಂದಲೇ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಈ ಭಯಾನಕ ಮಿಡತೆ ದಂಡು ಬೀದರ್ ಜಿಲ್ಲೆಗೂ ಲಗ್ಗೆಯಿಡುವ ಸಾದ್ಯತೆಯಿದೆಯೆಂದು ಜಿಲ್ಲಾಧಿಕಾರಿ ಎಚ್. ಆರ್ ಮಹದೇವ್ ಹೇಳಿದ್ದಾರೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮತ್ತಿತರ ಉತ್ತರ ಭಾರತದ ರಾಜ್ಯಗಳ ಮೇಲೆ ದಾಳಿ ನಡೆಸಿರುವ ಮಿಡತೆಯ ದಂಡು ರೈತರನ್ನು ಕಾಡುತ್ತಿದೆ. ಹಸಿರು ಹೊಲವನ್ನು ನಾಶ ಮಾಡುತ್ತಿವೆ ಭಾರತದ ಕೆಲ ರಾಜ್ಯಗಳ ರೈತರು ಬೆಳೆದ ಬೆಳೆ ಹಾಗೂ ಕೃಷಿ ಚಟುವಟಿಕೆಗಳನ್ನು ನಾಶಗೊಳಿಸಿರುವ ಈ ಕೋಟ್ಯಾಂತರ ಮಿಡತೆಗಳು ಭಾರೀ ಆತಂಕ ಸೃಷ್ಟಿಸಿವೆ. ಗ್ರಾಮಸ್ಥರು ಮಿಡತೆಗಳ ಹಿಂಡನ್ನು ಬೆಂಕಿ ಹಚ್ಚಿ ಸುಟ್ಟಿರು ಸಹ ಮತ್ತಷ್ಟು ಮೀಡಿತೆಗಳ ಹಿಂಡು ಬರುತ್ತಿದೆ.