ಕರ್ನಾಟಕದತ ಮೀಡಿತೆಯ ದಂಡು

ಕೊರೊನಾ ವೈರಸ್ ನ ಮಹಾಮಾರಿ ಹಾವಳಿ ನಡುವೆಯೇ ದೈತ್ಯ ಮಿಡತೆಗಳ ಕಾಟ ಕೋಲಾರಕ್ಕೂ ಕಾಲಿಟ್ಟಿದೆ ಹಾಗೂ ನಾಗ್ಪುರದಲ್ಲಿ ಮಿಡತೆಗಳ ಹಿಂಡು ಇರುವ ಬಗ್ಗೆ ಸರ್ಕಾರದಿಂದಲೇ ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ಲಭಿಸಿದೆ. ಈ ಭಯಾನಕ ಮಿಡತೆ ದಂಡು ಬೀದರ್ ಜಿಲ್ಲೆಗೂ ಲಗ್ಗೆಯಿಡುವ ಸಾದ್ಯತೆಯಿದೆಯೆಂದು ಜಿಲ್ಲಾಧಿಕಾರಿ ಎಚ್. ಆರ್ ಮಹದೇವ್ ಹೇಳಿದ್ದಾರೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ಮತ್ತಿತರ ಉತ್ತರ ಭಾರತದ ರಾಜ್ಯಗಳ ಮೇಲೆ ದಾಳಿ ನಡೆಸಿರುವ ಮಿಡತೆಯ ದಂಡು ರೈತರನ್ನು ಕಾಡುತ್ತಿದೆ. ಹಸಿರು ಹೊಲವನ್ನು ನಾಶ ಮಾಡುತ್ತಿವೆ ಭಾರತದ ಕೆಲ ರಾಜ್ಯಗಳ ರೈತರು ಬೆಳೆದ ಬೆಳೆ ಹಾಗೂ ಕೃಷಿ ಚಟುವಟಿಕೆಗಳನ್ನು ನಾಶಗೊಳಿಸಿರುವ ಈ ಕೋಟ್ಯಾಂತರ ಮಿಡತೆಗಳು ಭಾರೀ ಆತಂಕ ಸೃಷ್ಟಿಸಿವೆ. ಗ್ರಾಮಸ್ಥರು ಮಿಡತೆಗಳ ಹಿಂಡನ್ನು ಬೆಂಕಿ ಹಚ್ಚಿ ಸುಟ್ಟಿರು ಸಹ ಮತ್ತಷ್ಟು ಮೀಡಿತೆಗಳ ಹಿಂಡು ಬರುತ್ತಿದೆ.

 

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ 75 ಮಂದಿಗೆ ಕೊರೊನಾ ಸೋಂಕು

Thu May 28 , 2020
ಕರ್ನಾಟಕದಲ್ಲಿ  ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಇದು ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ 75 ಮಂದಿಗೆ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. 2,493ಕ್ಕೆ ಏರಿಕೆಯಾಗಿದ್ದು. ಕೊರೊನಾ ಮಹಾಮಾರಿಗೆ 47 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ. ಉಡುಪಿ – 27, ಕಲಬುರಗಿ – 3, ಬೆಂಗಳೂರು – 7, ಚಿತ್ರದುರ್ಗ – 6, ದಕ್ಷಿಣ ಕನ್ನಡ -6, ಹಾಸನ […]

Advertisement

Wordpress Social Share Plugin powered by Ultimatelysocial