ಕಲ್ಯಾಣ ಕರ್ನಾಟಕಕ್ಕೆ 650 ಬೆಡ್ ರವಾನೆಗೆ ಡಿಕೆಶಿ ಹಸಿರು ನಿಶಾನೆ

ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಗಳು ಮತ್ತಿತರ ಕಡೆ ಸೋಂಕಿತರಿಗೆ ಬೆಡ್ ಗಳ ಕೊರತೆ ಉಂಟಾಗಿದ್ದು, ಅವರ ಪ್ರಾಣಕ್ಕೂ ಸಂಚಾರ ಉಂಟಾಗಿದೆ. ಇಂಥ ಸಂಕಷ್ಟ ಸನ್ನಿವೇಶದಲ್ಲಿ ಅತಿ ಕಡಿಮೆ ವೆಚ್ಚ, ಸುಲಭ ಸಾಗಣೆ, 350 ಕೆಜಿಯಷ್ಟು ಭಾರ ತಡೆಯಬಹುದಾದ ಶೇಕಡಾ 100 ರಷ್ಟು ನವೀಕರಿಸಬಹುದಾದ ಪರಿಸರ ಸ್ನೇಹಿ 650 ಬೆಡ್ ಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೊಡ್ಡಬಳ್ಳಾಪುರದಿಂದ ಕಲ್ಯಾಣ ಕರ್ನಾಟಕಕ್ಕೆ ಸಾಗಣೆ ಮಾಡಲು ಹಸಿರು ನಿಶಾನೆ ತೋರಿದರು.  ಹಾಸಿಗೆ, ದಿಂಬು ಎಲ್ಲ ಸೇರಿ ಬೆಡ್ ವೊಂದಕ್ಕೆ ಕೇವಲ 1000 ರೂಪಾಯಿಗೂ ಕಡಿಮೆ ವೆಚ್ಚ. ಇಂಥ ಬೆಡ್ ಗಳನ್ನು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಗುಲ್ಬರ್ಗಾಕ್ಕೆ 550 ಹಾಗೂ ರಾಯಚೂರಿಗೆಂದು 100 ಒಟ್ಟು 650 ಬೆಡ್ ಗಳನ್ನು ಇಲ್ಲಿನ ವಾಡ್ ಪ್ಯಾಕ್ ಸಂಸ್ಥೆಯಿಂದ ಖರೀದಿಸಿದ್ದು, ಡಿ.ಕೆ. ಶಿವಕುಮಾರ್ ಅವರು ಅವುಗಳನ್ನು ಖುದ್ದು ಪರಿಶೀಲನೆ ಮಾಡಿ ಕಳುಹಿಸಿಕೊಟ್ಟರು. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸ್ಥಳೀಯ ಶಾಸಕ ವೆಂಕಟರಮಣ ಈ ಸಂದರ್ಭದಲ್ಲಿ ಹಾಜರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಗೆ ಕಾದಿದ್ಯಾ ಭಾರಿ ಕಂಟಕ

Sun Jul 19 , 2020
ಬೆAಗಳೂರು ಕೊರೊನಾ ತವರೂರಾಗಿ ಬದಲಾಗ್ತಾಯಿದೆ ಪ್ರತಿನಿತ್ಯ ಸಾವಿರಾರು ಕೇಸುಗಳು ರಾಜಧಾನಿಯಲ್ಲಿ ಪತ್ತೆಯಾಗ್ತಾನೆ ಇವೆ ಆದ್ರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡAತೆ ಕಾಣ್ತಾಯಿಲ್ಲ…..ಹೌದು ಬೆಂಗಳೂರಿಗೆ ಕೊರೊನಾ ಕಂಟಕವಾಗಿದ್ದು ಮೆಜಾರಿಟಿ ಪಸ್ರೆಂಟ್ ಹೊರರಾಜ್ಯದವರಿಂದಲೇ ಎನ್ನುವ ಮಾತು ಹಸಿಯಿರುವಾಗಲೇ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಇರಲಿ ಪರೀಕ್ಷೆಯನ್ನು ಮಾಡದೆ ನಗರದೊಳಗೆ ಬಿಟ್ಟುಕೆಳ್ಳಲಾಗ್ತಾಯಿದೆ. ಹವರಾ ಎಕ್ಷ್ಪ್ರೆಸ್‌ನಲ್ಲಿ ರಾಜ್ಯಕ್ಕೆ ಬಂದವರನ್ನ ಪರೀಕ್ಷೆಯನ್ನು ಸಹ ನಡೆಸದೆ ನಗರದೊಳಗೆ ಬಿಟ್ಟುಕೊಳ್ತಾಯಿರುವುದು ಸ್ಪೀಡ್ ನ್ಯೂಸ್ ಕ್ಯಾಮರ ಕಣ್ಣಿಗೆ ಯಶವಂತಪುರದಲ್ಲಿ ಬಿತ್ತು , ಇವರ […]

Advertisement

Wordpress Social Share Plugin powered by Ultimatelysocial