ಕಳಪೆ ರಸ್ತೆ ಕಾಮಗಾರಿ ನಿರ್ವಹಣೆ ತನಿಖೆಗೆ ಅಗ್ರಹ

ದೇವದುರ್ಗ: ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಕೂಡಲೇ ಗುತ್ತಿಗೆದಾರರ ಬಿಲ್ ನ್ನು ತಡೆದು ತನಿಖೆ ಮಾಡುವಂತೆ ತಹಶೀಲ್ದಾರರಿಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ತಾಲೂಕಿನ ಗೋಪನದೇವರಹಳ್ಳಿಯಿಂದ ಸಲಿಕ್ಯಾಪೂರು ಮತ್ತು ಮಶಿಹಾಳ ಗ್ರಾಮದ ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸರ್ಕಾರದ ಆದೇಶದಂತೆ 12 ಫೀಟ್ ಅಗಲದಂತೆ ಡಾಂಬರಿಕರಣ ಮಾಡಬೇಕು. ಆದರೆ ಈ ರಸ್ತೆಯಡಿ 8 ಫೀಟ್ ಅಗಲ ಮಾತ್ರ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಚ್ ಕೆ ಆರ್ ಡಿ ಬಿ ಅನುದಾನ ಈ ರಸ್ತೆಗೆ 70 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದ ನಿಯಮಾನುಸಾರವಾಗಿ ಮಾಡಬೇಕಾದ ರಸ್ತೆ ಸಂಪೂರ್ಣ ಕಳಪೆ ಆಗಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ಮಾಡಿ ಗುತ್ತಿಗೆದಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಗುತ್ತಿಗೆದಾರನಿಗೆ ಬಿಲ್ ಯಾವುದೇ ಕಾರಣಕ್ಕೂ ಪಾವತಿಸಬಾರದು ಎಂದು ದೇವದುರ್ಗ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ತಹಶೀಲ್ದಾರರಿಗೆ ಮನವಿ ಪತ್ರದ ಮೂಲಕ  ಒತ್ತಾಯಿಸಿದ್ದಾರೆ ಇದೆ ಸಂದರ್ಭದಲ್ಲಿ ಅಧ್ಯಕ್ಷ ಭೀಮಶಂಕರ್ ಯರಮಸಾಳ ಖಾಸಿಂಸಾಬ್ ಹಿರೇಬೂದರು ರಾಘವೇಂದ್ರ ಕೆಂಗಲ್ ಸೇರಿದಂತೆ ಇತರರು ಇದ್ದರು.

 

Please follow and like us:

Leave a Reply

Your email address will not be published. Required fields are marked *

Next Post

ವಿಶೇಷ ಬೂಟ್ಸ್

Mon Jun 1 , 2020
ರೊಮೇನಿಯಾದಲ್ಲಿ ಸರಿಸುಮಾರು ಎರಡು ತಿಂಗಳ ಕಾಲ ಲಾಕ್ಡೌನ್ ಇತ್ತು, ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಹಾಗೂ ಪ್ರಪಂಚದಾದ್ಯಂತದ ದೇಶಗಳು ಕೊರೊನಾದಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದೆ ಇದನ್ನೆಲ್ಲಾ ಗಮನಿಸಿದ ಬೂಟ್ ಕಂಪನಿಯೊಂದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಭಿನ್ನ ಬೂಟುಗಳನ್ನು ತಯಾರಿಸಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಬೂಟುಗಳು ನೆರವಾಗಲಿವೆ, ಉದ್ದದ ಬೂಟುಗಳನ್ನು ಈಗಾಗಲೇ ಗ್ರಿಗೊರ್ ಲೂಪ್ ಹೆಸರಿನ […]

Advertisement

Wordpress Social Share Plugin powered by Ultimatelysocial