ದೇವದುರ್ಗ: ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಕೂಡಲೇ ಗುತ್ತಿಗೆದಾರರ ಬಿಲ್ ನ್ನು ತಡೆದು ತನಿಖೆ ಮಾಡುವಂತೆ ತಹಶೀಲ್ದಾರರಿಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ತಾಲೂಕಿನ ಗೋಪನದೇವರಹಳ್ಳಿಯಿಂದ ಸಲಿಕ್ಯಾಪೂರು ಮತ್ತು ಮಶಿಹಾಳ ಗ್ರಾಮದ ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸರ್ಕಾರದ ಆದೇಶದಂತೆ 12 ಫೀಟ್ ಅಗಲದಂತೆ ಡಾಂಬರಿಕರಣ ಮಾಡಬೇಕು. ಆದರೆ ಈ ರಸ್ತೆಯಡಿ 8 ಫೀಟ್ ಅಗಲ ಮಾತ್ರ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಎಚ್ ಕೆ ಆರ್ ಡಿ ಬಿ ಅನುದಾನ ಈ ರಸ್ತೆಗೆ 70 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದ ನಿಯಮಾನುಸಾರವಾಗಿ ಮಾಡಬೇಕಾದ ರಸ್ತೆ ಸಂಪೂರ್ಣ ಕಳಪೆ ಆಗಿದೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ತನಿಖೆ ಮಾಡಿ ಗುತ್ತಿಗೆದಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಹಾಗೂ ಗುತ್ತಿಗೆದಾರನಿಗೆ ಬಿಲ್ ಯಾವುದೇ ಕಾರಣಕ್ಕೂ ಪಾವತಿಸಬಾರದು ಎಂದು ದೇವದುರ್ಗ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ತಹಶೀಲ್ದಾರರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ ಇದೆ ಸಂದರ್ಭದಲ್ಲಿ ಅಧ್ಯಕ್ಷ ಭೀಮಶಂಕರ್ ಯರಮಸಾಳ ಖಾಸಿಂಸಾಬ್ ಹಿರೇಬೂದರು ರಾಘವೇಂದ್ರ ಕೆಂಗಲ್ ಸೇರಿದಂತೆ ಇತರರು ಇದ್ದರು.