ನಾನಾ ಕಾರಣಗಳನ್ನು ಹೇಳಿಕೊಂಡು ಕಳ್ಳ ಮರ್ಗಗಳ ಮೂಲಕ ಗಡಿ ಪ್ರವೇಶ ಮಾಡುತ್ತಿರುವವರಿಂದ ಗಡಿ ಗ್ರಾಮಗಳಲ್ಲಿನ ಗ್ರಾಮಸ್ಥರಲ್ಲಿ ಕರೊನಾ ಆತಂಕ ಹೆಚ್ಚಾಗುತ್ತಿದೆ. ಭೀಮಾ ತೀರದ ಮಹಾರಾಷ್ಟ್ರದ ಗಡಿ ಗ್ರಾಮವಾದ ತೇಲಗಾಂವ ಗ್ರಾಮದ ೩೦ ಜನರನ್ನು ಸೋಲಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಮಹಾರಾಷ್ಟ್ರದ ತೇಲಗಾಂವ ಸೇರಿದಂತೆ ಇತರಡೆಗಳಿಂದ ಚಡಚಣ ತಾಲೂಕಿನ ಉಮರಜ ಗ್ರಾಮದ ಮೂಲಕ ಗಡಿ ಪ್ರವೇಶಿಸುತ್ತಿದ್ದು. ಇದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಭೀಮಾ ನದಿಯ ಮೂಲಕ ಒಳ ನುಸುಳುವವರ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ಕಳ್ಳ ಮರ್ಗದ ಮೂಲಕ ಬರುತ್ತಿರುವ ಮಹಾರಾಷ್ಟ್ರೀಗರು/ ಭೀಮಾ ತೀರದ ಗ್ರಾಮಸ್ಥರಿಗೆ ಹೆಚ್ಚಿದ ಆತಂಕ
Please follow and like us: