ಕುಂದಾಪುರದ ಮಾಜಿ ಕ್ರೀಡಾಪಟು ಕುವೈಟ್ ನಲ್ಲಿ ಬಲಿ

ಇಲ್ಲಿನ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್, ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿಯೊಬ್ಬರು ಕುವೈಟ್ ನಲ್ಲಿ ನಿಧನರಾಗಿದ್ದಾರೆ. ಕುವೈಟ್‌ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು ೨೨ ದಿನಗಳಿಂದಲೂ ಕುವೈಟ್ ನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಮೃತ ದೇಹದ ಅಂತಿಮ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಹಾವಳಿ ನಡುವೆ ಫ್ಯಾಂಟಮ್ ಶುರು

Fri Jul 17 , 2020
ಚಿತ್ರರಂಗದ ಮಂದಿ, ಆಕ್ಷನ್ ಎಂಬ ಪದ ಕೇಳಿ ಅದೆಷ್ಟು ದಿನಗಳಾಗಿದ್ದವೋ ಗೊತ್ತಿಲ್ಲ. ಹೀಗೆ ಲಾಕ್​ಡೌನ್​ನಿಂದ ಮನೆಯಲ್ಲೇ ಲಾಕ್​ಡೌನ್ ಆಗಿದ್ದ ಸಿನಿಮಾದವರಿಗೆ, ಚಿತ್ರೀಕರಣ ಮಾಡಿ ಎಂದು ಸರ್ಕಾರ ಅನುಮತಿ ನೀಡಿ ಒಂದು ತಿಂಗಳ ಮೇಲಾಗಿದೆ. ಆದರೂ ಕರೊನಾ ಹಾವಳಿಯಿಂದಾಗಿ ಬಹಳಷ್ಟು ಜನ ಚಿತ್ರೀಕರಣ ಮುಂದೆ ಬರುತ್ತಿಲ್ಲ. ಒಂದು ದೊಡ್ಡ ಚಿತ್ರದ ತಂಡದವರು ಧೈರ್ಯದಿಂದ ಮುಂದೆ ಬಂದು, ಕೆಲಸ ಪ್ರಾರಂಭಿಸಿದರೆ ಬೇರೆಯವರು ಸಹ ಶುರು ಮಾಡಬಹುದು ಎಂದು ಚಿತ್ರರಂಗ ಕಾಯುತ್ತಿದ್ದರೂ. ಇದೀಗ ಸುದೀಪ್, […]

Advertisement

Wordpress Social Share Plugin powered by Ultimatelysocial