ಕೊರೊನಾ ಭಯದಿಂದ ಕೆಎಸ್ಆರ್ಪಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಬಸ್ ಅಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಎಸ್ ಆರ್ ಪಿ ಬಸ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 50 ವರ್ಷದ ಕೆಎಸ್ಆರ್ಪಿ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಇವರಿಗೆ ಜೂನ್ 20 ರಂದು ಕೊವಿಡ್ ಪರೀಕ್ಷೆ ಮಾಡಿಸಲಾಗಿತ್ತು ನಿನ್ನೆ ಸಂಜೆಯಷ್ಟೇ ಪಾಸಿಟಿವ್ ಬಂದಿತ್ತು,ಪಾಸಿಟಿವ್ ಬಂದ ಹಿನ್ನೆಲೆ ಸಿವಿ ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಮಾರ್ಗ ಮಧ್ಯದಲ್ಲಿಯೇ ನೇಣಿಗೆ 4 ನೇ ಬೆಟಾಲಿಯನ್ ಕೆಎಸ್ಆರ್ಪಿ ಸಿಬ್ಬಂದಿ ಕೆಎಸ್ ಆರ್ ಪಿ ವಾಹನದಲ್ಲಿಯೇ ನೇಣಿಗೆ ಶರಣಗಿದ್ದಾರೆ