ನವದೆಹಲಿ : ಕೊರೊನಾದಿಂದ ತತ್ತರಿಸಿದ ಜನತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಈ ಯೋಜನೆಯಡಿ ೩೧,೨೩೫ ಕೋಟಿ ರೂಪಾಯಿಯನ್ನು ಸುಮಾರು ೩೩ ಕೋಟಿ ಬಡವರ ಖಾತೆಗೆ ಜಮೆಮಾಡಲಾಗಿದೆ. ಈ ಕುರಿತಂತೆ ಕೇಂದ್ರದ ಹಣಕಾಸು ಇಲಾಖೆ ಮಾಹಿತಿ ನೀಡಿದ್ದು,ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನೀಡಲಾಗಿರುವ ೩೧,೨೩೫ ಕೋಟಿ ರೂಪಾಯಿ ಪ್ಯಾಕೇಜ್ ಪೈಕಿ ೨೦.೦೫ ಕೋಟಿ ಜನಧನ್ ಮಹಿಳಾ ಖಾತೆದಾರರಿಗೆ ೧೦ ಸಾವಿರದ ೦೨೫ ಕೋಟಿ ರೂಪಾಯಿಯನ್ನು ಜಮೆ ಮಾಡಲಾಗಿದೆ. ಇನ್ನು ೨.೮೨ ಕೋಟಿ ಮಂದಿ ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತನರ ಖಾತೆಗಳಿಗೆ ೧೪೦೫ ಕೋಟಿ ರೂ. ವಿತರಿಸಲಾಗಿದೆ. ಇದರೊಂದಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊದಲ ಕಂತಿನಲ್ಲಿ ೧೬,೧೪೬ ಕೋಟಿ ರೂಪಾಯಿಯನ್ನು ಸುಮಾರು ೮ ಕೋಟಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಹಾಗೂ ೧೦.೬ ಲಕ್ಷ ನೌಕರರಿಗೆ ಅನುಕೂಲವಾಗಲೆಂದು ೧೬೨ ಕೋಟಿ ರೂಪಾಯಿಯನ್ನು ಇಪಿಎಫ್ ಗಾಗಿ ವಿತರಣೆ ಮಾಡಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್
Please follow and like us: