ಕೊರೊನಾ ನಡುವೆಯು ಟ್ರಾಫಿಕ್ ಜಾಮ್

ಕೊರೊನಾ ಲಾಕ್  ಡೌನ್  ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಕಾವೇರಿ ಜಂಕ್ಷನ್ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು  ಖಾಲಿಯಾಗಿದ್ದವು. ಆದರೆ ಇಂದು  ಮತ್ತೆ ಬೆಂಗಳೂರು ನಗರ ಮತ್ತೆ ತನ್ನ ವಾಸ್ತವ ಸ್ಥಿತಿಗೆ ಮರಳಿದಂತಾಗಿದೆ. ಸರ್ಕಾರ ಕೆಲ ಕಂಡಿಷನ್ ಹಾಕಿ ಐಟಿ ಕಂಪನಿಗಳನ್ನು ತೆರಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ  ಹೆಚ್ಚಾಗಿ ಪಾಸ್ ನೀಡಿರುವ ಹಿನ್ನೆಲೆ  ವಾಹನಗಳು ರೋಡಿಗಿಳಿದಿವೆ. ಕಾವೇರಿ ಜಂಕ್ಷನ್ ಬಳಿ ಟ್ರಾಫಿಕ್  ಜಾಮ್ ಆಗಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ  ವಾಹನಗಳ  ಪಾಸ್ ಚೆಕ್ ಮಾಡುತ್ತಿದ್ದಾರೆ. ಈ ಹಿನ್ನೆಲೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ನಗರದ ಬಳ್ಳಾರಿ ರಸ್ತೆ ಪ್ಯಾಲೇಸ್ ಗ್ರೌಂಡ್ ಬಳಿ ಕಿಲೋ ಮೀಟರ್ ಗಟ್ಟಲೆ ಜಾಮ್ ಆಗಿದ್ದು,ಪೊಲೀಸರು ಕ್ಲಿಯರ್ ಮಾಡಲು ಹರಸಾಹಸ ಪಡುತ್ತಿದ್ದಾರೆ..

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾದಿಂದ ಹೆಚ್ಚಿದ ಬಡತನ

Thu Apr 23 , 2020
ಜಿನಿವಾ: ಕರೊನಾ ಸಂಕಷ್ಟ ಸೆಪ್ಟಂಬರ್‌ವರೆಗೂ ತನ್ನ ಕರಾಳ ಛಾಯೆ ಬೀರಲಿದೆ ಎನ್ನುತ್ತಾರೆ ತಜ್ಞರು. ಅಂದರೆ ಇನ್ನು ಆರು ತಿಂಗಳು ಒಂದಲ್ಲಾ ಒಂದು ರೀತಿಯ ನಿರ್ಬಂಧ ಮುಂದುವರೆಯಲಿದೆ. ಅಲ್ಲಿಯವರೆಗೆ ದೇಶದ ಆರ್ಥಿಕ ಸ್ಥಿತಿಯೂ ಗಂಭೀರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ನೀಡಿದೆ. ಕರೊನಾಗೂ ಮುನ್ನ ವಿಶ್ವದಲ್ಲಿ ೧೩ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದರೆ, ಕರೊನಾ ನಂತರದಲ್ಲಿ ಇವರ ಸಂಖ್ಯೆ ದುಪ್ಪಟ್ಟಾಗಲಿದೆ. ಅಂದರೆ ೨೬ ಕೋಟಿಗೂ ಅಧಿಕ ಜನರು ತುತ್ತು ಅನ್ನಕ್ಕೂ ಪರಿತಪಿಸಲಿದ್ದಾರೆ. ಅದರಲ್ಲೂ ಜನರಿಗೆ […]

Advertisement

Wordpress Social Share Plugin powered by Ultimatelysocial