ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಕಾವೇರಿ ಜಂಕ್ಷನ್ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು ಖಾಲಿಯಾಗಿದ್ದವು. ಆದರೆ ಇಂದು ಮತ್ತೆ ಬೆಂಗಳೂರು ನಗರ ಮತ್ತೆ ತನ್ನ ವಾಸ್ತವ ಸ್ಥಿತಿಗೆ ಮರಳಿದಂತಾಗಿದೆ. ಸರ್ಕಾರ ಕೆಲ ಕಂಡಿಷನ್ ಹಾಕಿ ಐಟಿ ಕಂಪನಿಗಳನ್ನು ತೆರಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚಾಗಿ ಪಾಸ್ ನೀಡಿರುವ ಹಿನ್ನೆಲೆ ವಾಹನಗಳು ರೋಡಿಗಿಳಿದಿವೆ. ಕಾವೇರಿ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಆಗಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳ ಪಾಸ್ ಚೆಕ್ ಮಾಡುತ್ತಿದ್ದಾರೆ. ಈ ಹಿನ್ನೆಲೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ನಗರದ ಬಳ್ಳಾರಿ ರಸ್ತೆ ಪ್ಯಾಲೇಸ್ ಗ್ರೌಂಡ್ ಬಳಿ ಕಿಲೋ ಮೀಟರ್ ಗಟ್ಟಲೆ ಜಾಮ್ ಆಗಿದ್ದು,ಪೊಲೀಸರು ಕ್ಲಿಯರ್ ಮಾಡಲು ಹರಸಾಹಸ ಪಡುತ್ತಿದ್ದಾರೆ..
ಕೊರೊನಾ ನಡುವೆಯು ಟ್ರಾಫಿಕ್ ಜಾಮ್
Please follow and like us: