ಕೊರೊನಾ ಸೋಂಕಿತನ ಕುಟುಂಬಕ್ಕೆ ಸಾರ್ವಜನಿಕರು ಸಾಮಾಜಿಕ ಬಹಿಷ್ಕಾರ ಹಾಕಿರುವ ಆರೋಪ ಕೇಲಿಬಂದಿದೆ.ಜಿಲ್ಲೆಯ ಚಾಲುಕ್ಯ ನಗರದಲ್ಲಿರುವ ಸೋಂಕಿತರ ಕುಟುಂಬಕ್ಕೆ ಹಾಲು,ಪತ್ರಿಕೆ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೆ ಪೂರೈಸದಂತೆ ಸ್ಥಳೀಯರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರವಾಗಿ ನೋಂದಿರುವ ಕುಟುಂಬಸ್ಥರು ಪ್ರಧಾನಿ ಕಾರ್ಯಾಲಯ ಮುಖ್ಯಮಂತ್ರಿಗಳಿಗೆ,ಆರೋಗ್ಯ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಟ್ವೀಟ್ ಮಾಡುವ ಮೂಲಕ ದೂರು ನೀಡಿದ್ದಾರೆ.
ಇದುವರೆಗೂ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ.ಅವರನ್ನು ಮನೆಯ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ಇರಿಸಿದ್ದೇವೆ.ಮಾತ್ರೆ ಸೇರಿದಂತೆ ಇತರೆ ಔಷಧಗಳನ್ನು ಆರೋಗ್ಯ ಇಲಾಖೆ ನೀಡಿದೆ.ಕುಟುಂಬದ ಇತರ ಆರು ಜನರು ಕೆಳ ಮನೆಯಲ್ಲಿ ವಾಸವಾಗಿದ್ದೇವೆ.ಆದ್ರೆ ಮನೆಯ ಸುತ್ತಮುತ್ತಲ ಜನರ ವರ್ತನೆಯಿಂದಾಗಿ ನಾವು ಬೇಸತ್ತಿದ್ದೇವೆ.ನಮ್ಮ ಕುಟುಂಬಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.