ಕೊರೊನಾ ಸೋಂಕು ತಡೆಯುವ ಎಲ್ಲ ಪ್ರಯತ್ನವನ್ನೂ ರಾಜ್ಯಸರ್ಕಾರ ಮಾಡಿದರು ಪ್ರಯತ್ನದಲ್ಲಿ ಕೊಂಚ ಪೂರ್ವಭಾವಿ ಸಿದ್ಧತೆ ಇದ್ದರೆ ಉತ್ತಮವೇನೋ ಎನ್ನುವ ಅನಿಸಿಕೆ ಎಲ್ಲರಲು ಮೂಡುತ್ತಿರುವುದು ಸಹಜ. ಒಂದು ಸರಿಯಾದ ಪ್ಲಾನ್ ನೀಲಿನಕ್ಷೆ ಇಲ್ಲದಿರುವುದೇ ಈ ಎಲ್ಲ ಕೆಡುಕಿಗೂ ಕಾರಣವಾಗಿದೆ. ಪಬ್ಲಿಕ್ ಹೆಲ್ತ್ ಕೇರ್ ಸೆಂಟರ್ ಈಗ ಕೊರೊನಾ ಸೋಂಕು ಹರಡುವ ಹಾಟ-ಸ್ಪಾಟ್ ಆಗುತ್ತಿದೆಯಾ ಎನ್ನುವ ಶಂಕೆ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ಕೊರೊನಾ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅನೇಕ ಪಿಎಚ್ಸಿ ಕಟ್ಟಡಗಳಲ್ಲಿ ಒಂದೇ ಬಾಗಿಲಿದೆ. ಕೋವಿಡ್ ಪರೀಕ್ಷೆಗೆ ಬರುವವರನ್ನು ಪ್ರತ್ಯೇಕಿಸುವ ಯಾವ ವ್ಯವಸ್ಥೆಯೂ ಸದ್ಯಕ್ಕೆ ಈ ಸೆಂಟರ್ನಲ್ಲಿ ಇಲ್ಲ ಎಂದು ವೈದ್ಯರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಲ್ಯಾಪ್ ಟೆಕ್ನಿಷಿಯನ್ ಗಳೇ ಆಂಟಿಜೆನ್ ಪರೀಕ್ಷೆ ನಡೆಸುತ್ತಾರೆ. ಕರುನಾ ಪರೀಕ್ಷೆಯ ಗಂಟಲು ದ್ರವ ಸಹ ಇವರೇ ಮಾಡಬೇಕು. ಪಿಎಚ್ ಸಿ ಸೆಂಟರ್ ನಲ್ಲಿ ಕೇವಲ ಒಬ್ಬರೇ ಒಬ್ಬ ವೈದ್ಯರಿದ್ದಾರೆ ಅವರು ಕೋರೋಣ ಪರೀಕ್ಷೆ ಮಾಡಬೇಕು ಜನರ ಆರೋಗ್ಯ ತಪಾಸಣೆಯನ್ನು ಮಾಡಬೇಕು ಹಾಗೂ ಕೊರೋನ ಟೆಸ್ಟ್ ನ್ ಮಾಹಿತಿಗಳನ್ನು ವೆಬ್ ಪೋರ್ಟಲ್ ಗಳಿಗೆ ಆ್ಯಪ್ಗಳಿಗೆ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಜನರ ಆರೋಗ್ಯ ತಪಾಸಣೆಗೆ ಹಿಂದೇಟು ಹಾಕುತ್ತಿದೆ. ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ.
ಕೊರೊನಾ ಸೋಂಕು ತಡೆಯುವಲ್ಲಿ ರಾಜ್ಯಸರ್ಕಾರ ವಿಫಲ
Please follow and like us: