ನಿಲೋಗಪುರ ಗ್ರಾಮದ ಯುವಕ ಒಂದು ವರ್ಷ ದಿಂದ ಕೋಮಾ ಸ್ಥಿತಿಯಲ್ಲಿದ್ದಾನೆ. ಹೌದು ಕೊಪ್ಪಳ ತಾಲೂಕಿನ ನಿಲೋಗಪುರ ಗ್ರಾಮದ ವೆಂಕಟೇಶ್ ಎಂಬ ಯುವಕ ಕಳೆದ ವರ್ಷ ಆಂಜನೇಯ ಜಾತ್ರೆಯ ವೇಳೆ ದೇವಸ್ಥಾನ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಜೀವನದ ಕನಸುಗಳನ್ನು ಸುಂದರಗೊಳಿಸುವ ಧಾವಂತದಲ್ಲಿರುವಾಗಲೇ ಗೋಪುರ ಕೆಲಸ ಮಾಡುವಾಗ ಕೈ ಜಾರಿ ಮೇಲಿಂದ ಬಿದ್ದು ಇವತ್ತಿಗೂ ಕೋಮಾ ಸ್ಥಿತಿಯಲ್ಲಿದ್ದಾನೆ. ಇರುವ ಒಬ್ಬ ಮಗನ ಕೋಮಾ ಸ್ಥಿತಿಯಲ್ಲಿ ಕಳೆದ ಒಂದು ವರ್ಷದಿಂದ ಆರೈಕೆ ಮಾಡುತ್ತಾ ತಂದೆ ತಾಯಿ ಪ್ರತಿ ದಿನ ನೋವು ನು೦ಗಿ ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯ ಯುವಕರು ಪ್ರತಿದಿನ ಸಂಜೆ ಮನೆಗೆ ಬಂದು ವೆಂಕಟೇಶ್ ಗೆ ಮಸಾಜ್ ಮಾಡುವ ಮುಖಾಂತರ ಮಾನವೀಯತೆ ಮೆರೆಯುತ್ತಿದ್ದಾರೆ. ಈಗಾಗಲೇ ಹೊಲ ಮಾರಿ ಸರಿಸುಮಾರು ೧೬ ಲಕ್ಷದಷ್ಟು ವ್ಯಯಿಸಿದ ಇವರಿಗೆ ಇನ್ನು ಮುಂದಿನ ಚಿಕಿತ್ಸೆಗಾಗಿ ಸಹೃದಯಿ ದಾನಿಗಳ ಆಸರೆಯನ್ನು ಪಡೆಯದೆ ನಿರ್ವಾಹವಿಲ್ಲ.ರೋಗದ ಸಮರ್ಪಕವಾದ ಚಿಕಿತ್ಸೆ ನೀಡಬೇಕಾದರೆ ಇನ್ನೂ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು. ನಮ್ಮಂತೆಯೇ ಸಂತಸದಿAದ ನಲಿದಾಡಬೇಕಿದ್ದ ಯುವಕನ ಚಿಕಿತ್ಸೆಗೆ ಸಹೃದಯಿಗಳು ಮಾನವೀಯ ಹಸ್ತವನ್ನು ಚಾಚಬೇಕಾಗಿದೆ. ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಫೋನ್ ಪೇ ಅಥವಾ ಗೂಗಲ್ ಪೇ ೮೯೭೦೫೫೬೬೮೬ ಹೆಸರು ಚೈತ್ರಾ ಜಗದೀಶ್ ರಡ್ಡಿ ಅವರ ನಂಬರ್ ಗೇ ಹಣ ವರ್ಗಾಯಿಸಬಹುದು.
ಕೋಮಾ ಸ್ಥಿತಿಯಲ್ಲೂ ದೇಹದಾನ ಮಾಡಿ ಮಾನವೀಯತೆ
Please follow and like us: