ಕೋಲಾರ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಳ್ಳತನ ಕಾರಿನ ಗ್ಲಾಸ್ ಹೊಡೆದು 4 ಲಕ್ಷ ರೂಪಾಯಿ ಲಪಟಾಯಿಸಿ ಪರಾರಿ ಆಗಲು ಯತ್ನ. ಬೆಂಗಳೂರು ಜಲ ನಿಗಮ ಮಂಡಳಿ ಮ್ಯಾನೇಜರ್ ಕೇಶವಮೂರ್ತಿ ಎಂಬುವವರಿಗೆ ಸೇರಿರುವ ಕಾರು. ಬೆಂಗಳೂರಿನಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಕೇಶವಮೂರ್ತಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ವಾಪಸ್ಸಾಗುವ ವೇಳೆ ಕೃತ್ಯ. ಕಾರು ಚಾಲಕನಿಗೆ ಹಣ ಇದೆ ಹುಷಾರು ಎಂದು ಹೇಳಿ ಜಿಲ್ಲಾಧಿಕಾರಿ ಕಚೇರಿಗೆ ಹೋಗಿದ್ದ ಕೇಶವಮೂರ್ತಿ ಡಿಸಿ ಕಚೇರಿಗೆ ಹೋಗುತ್ತಿದ್ದಂತ್ತೆ ಕಾರು ಚಾಲಕ ಸುನೀಲ್ ನಿಂದ ಕೃತ್ಯ ನಡೆದಿದೆ. ಕಳ್ಳತನವಾಗಿರುವ 4 ಲಕ್ಷ ರೂ. ಇಲಾಖೆಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಮ್ಯಾನೇಜರ್ ಕೇಶವಮೂರ್ತಿ ಅನುಮಾನಗೊಂಡು ಜೋರು ಮಾಡಿ ವಿಚಾರಿಸಿದಾಗ ಬಾಯಿ ಬಿಟ್ಟ ಡ್ರೈವರ್ ಸುನೀಲ್ ಕಳೆದ ಮೂರು ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳ್ಳತನ ಮಾಡಿ ಕಾರಿನ ಡಿಕ್ಕಿಯಲ್ಲಿ ಸ್ಟೆಪ್ನಿ ಇಡುವ ಜಾಗದಲ್ಲಿ ಹಣ ಇಟ್ಟಿದ್ದು ತಾನೇ ಗ್ಲಾಸ್ ಹೊಡೆದು ಕಳ್ಳತನ ಮಾಡಿ ನಾಟಕ ಮಾಡುತ್ತಿದ್ದ ಸುನೀಲ್. ಕೋಲಾರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.