ಕ್ವಾರಂಟೈನ್‌ಗೆ ಹೋಗಲು ಹಣವಿಲ್ಲದೆ ಕುಟುಂಬದ ಪರದಾಟ

ಬೆಂಗಳೂರು:ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ವಿಮಾನಯಾನ ಶುರುವಾಗಿದೆ. ಇಂದು ರಾಜ್ಯದಲ್ಲಿ ದೇಶಿ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು, ಇಂದೋರ್‌ನಿಂದ ಆಗಮಿಸಿದ ಕುಟುಂಬವೊಂದು ಹೋಟೆಲ್ ಕ್ವಾರಂಟೈನ್‌ಗೆ ಹೋಗಲು ಹಣವಿಲ್ಲದೆ ಒಂದು ದಿನದಿಂದ ವಿಮಾನ ನಿಲ್ದಾಣದಲ್ಲಿದ್ದು ಪರದಾಡುವಂತಾಗಿದೆ.
ಇಂದೋರ್‌ನಿಂದ ದೆಹಲಿಗೆ ಆಗಮಿಸಿ ದೆಹಲಿಯಿಂದ ನಿನ್ನೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ಐದು ಜನರ ಬಡ ಕುಟುಂಬ ಹೋಟೆಲ್ ಕ್ವಾರಂಟೈನ್‌ಗೆ ಹಣ ಭರಿಸಲು ಸಾಧ್ಯವಾಗದೆ ಪರಿತಪಿಸುತ್ತಿದೆ. ನಿನ್ನೆಯಿಂದ ವಿಮಾನ ನಿಲ್ದಾಣದ ಒಳಗಡೆ ಇರುವ ಕುಟುಂಬ ಹೊರ ಬರಲು ಕಷ್ಟ ಪಡುತ್ತಿದೆ. ಇತ್ತ ದೆಹಲಿಯಿಂದ ಬಂದ ನನ್ನ ಪತ್ನಿಯನ್ನು ಹೊರಗೆ ಬಿಡುತ್ತಿಲ್ಲ ಎಂದು ಪತಿ ಆರೋಪ ಮಾಡುತ್ತಿದ್ದಾರೆ. ನಮಗೆ ಸರ್ಕಾರ ಸಹಾಯ ಮಾಡ್ತಿಲ್ಲ. ಕ್ವಾರಂಟೈನ್‌ಗೆ ಹಣವನ್ನು ಸರ್ಕಾರ ಭರಿಸಲಿ ಎಂದು ಪತಿ ವಿಮಾನ ನಿಲ್ದಾಣದಲ್ಲಿ ಮನವಿ ಮಾಡಿದ್ದಾನೆ.

Please follow and like us:

Leave a Reply

Your email address will not be published. Required fields are marked *

Next Post

ಉದ್ಯೋಗಿಗಳ ಸಂಬಳ ಕಡಿತಗೊಳಿಸಿದ ಟಿವಿಎಸ್

Tue May 26 , 2020
ಬೆಂಗಳೂರು: ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕ ಸಂಬಳ ಕಡಿತವನ್ನು ಘೋಷಿಸಿದೆ. ಕೊರನಾವೈರಸ್ ದೆಸೆಯಿಂದ ಲಾಕ್ಡೌನ್ ಆಗಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ತಕ್ಕಮಟ್ಟಿನ ನಷ್ಟ ಉಂಟಾಗಿದೆ. ವೇಣು ಶ್ರೀನಿವಾಸನ್ ನೇತೃತ್ವದ ಕಂಪನಿಯು ತನ್ನ ಎಕ್ಸಿಕ್ಯೂಟಿವ್ ಸ್ತರದ ಉದ್ಯೋಗಿಗಳ ಸಂಬಳವನ್ನು ಮಾತ್ರ ಕಡಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಅಕ್ಟೋಬರ್ ತಿಂಗಳ ತನಕ ಸಂಬಳ ಕಡಿತ ಜಾರಿಯಲ್ಲಿರುತ್ತದೆ. ಮೇ ತಿಂಗಳಿನಿAದ ಅಕ್ಟೋಬರ್ ೨೦೨೦ರ ತನಕ ಇದು […]

Advertisement

Wordpress Social Share Plugin powered by Ultimatelysocial