ಕೊರೊನಾ ವೈರಸ್ ಹಿನ್ನಲೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಅತ್ತಿಬೆಲೆ ಬಾರ್ಡರ್ ನಲ್ಲಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಎಲ್ಲಾ ವಾಹನಗಳಿಗೆ ಅನುಮತಿ ನೀಡುವುದಿಲ್ಲ ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಹೋಗುವ ವಾಹನಗಳಿಗೆ ಇ-ಪಾಸ್ ಇದ್ರೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ತುರ್ತು ಸಂಧರ್ಭಗಳಿಗೆ ಅನುಮತಿ ನೀಡಲಾಗುತ್ತದೆ. ಇನ್ನೂ ತರಕಾರಿ ವಾಹನಗಳಿಗೆ ಕಂಪನಿ ವರ್ಕರ್ಸ್ ಗಳಿಗೆ ಐಡಿ ಕಾರ್ಡ್ ಗಳು ಇದ್ದಾರೆ ಮಾತ್ರ ಅನುಮತಿ ನೀಡಲಾಗಿದೆ.ಕೆಲ ಸಾರ್ವಜನಿಕರು ನಕಲು ಐಡಿಗಳನ್ನು ಸೃಷ್ಟಿಸಿ ಸುಖಾ-ಸುಮ್ಮನೆ ಓಡಾಡುತ್ತಿದ್ದಾರೆ ಎಂದು ಈ ನಿಯಮವನ್ನು ತಂದಿರುವುದಾಗಿ ತಮಿಳುನಾಡಿನ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ನಿಯಮಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಸಿಸ್ಟೆಂಟ್ ಕಮಿಷನರ್ ಡಾಕ್ಟರ್ ಶಿವಣ್ಣ ಭೇಟಿ ನೀಡಿದ್ದಾರೆ