ಗದಗ: ವಸತಿ ನಿಲಯದಲ್ಲಿ ‘ಹುಳುಗಳ ಪಾಯಸ’! ದಂಗಾದ ವಿದ್ಯಾರ್ಥಿಗಳು, ಸಿಎಂಗೆ ಮನವಿ

ಗದಗ: ಗದಗನ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದಲ್ಲಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಶಾಕ್‌ ಆಗಿದ್ದಾರೆ.ವಸತಿ ನಿಲಯದಲ್ಲಿ ಮಾಡಿದ ಪಾಯಸದ ತುಂಬೆಲ್ಲಾ ಹುಳುಗಳು ಕಾಣಿಸಿಕೊಂಡಿವೆ.ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ (ಜ.28) ರಾತ್ರಿ ಈ ಪಾಯಸ ಮಾಡಲಾಗಿತ್ತು. ಅದನ್ನು ನೋಡಿದ ವಿದ್ಯಾರ್ಥಿಗಳು ಅರೆಕ್ಷಣ ದಂಗಾಗಿದ್ದಾರೆ. ಏಕೆಂದರೆ ಅದರ ತುಂಬ ಹುಳುಗಳು ಇದ್ದವು! ಇನ್ನು ಕೆಲವು ವಿದ್ಯಾರ್ಥಿಗಳು ಸರಿಯಾಗಿ ಪಾಯಸ ಗಮನಿಸದೇ ಅದನ್ನು ಸೇವಿಸಿದ್ದು, ಇದೀಗ ಗಾಬರಿ ಬಿದ್ದಿದ್ದಾರೆ.ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಈ ವಸತಿ ನಿಲಯವಿದೆ. ವಸತಿ ನಿಲಯದ ವಾರ್ಡನ್ ಬಿ.ಎಸ್. ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಯಿತು. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ.ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಈ ವಸತಿ ನಿಲಯವಿದೆ. ವಸತಿ ನಿಲಯದ ವಾರ್ಡನ್ ಬಿ.ಎಸ್. ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಯಿತು. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ.ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿ, ಊಟ ನೀಡಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೂ ಮನವಿ ಮಾಡಿಕೊಂಡಿದ್ದಾರೆ. 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕೆಂಪು ತುಟಿ ನಿಮ್ಮದಾಗಬೇಕಾ ?

Sat Jan 29 , 2022
ಕೆಂಪನೆಯ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಅದಕ್ಕಾಗಿ ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಮಾತ್ರ ಹಚ್ಚಿದ್ರೆ ಸಾಲದು. ನೈಸರ್ಗಿಕವಾಗಿಯೇ ನಿಮ್ಮ ತುಟಿಯನ್ನು ಕೆಂಪಗಾಗಿಸಿಕೊಳ್ಳಬಹುದು.ಒಣಗಿದ, ಕಪ್ಪನೆಯ ತುಟಿ ನಿಮ್ಮದಾಗಿದ್ರೆ ಒಂದು ಚಮಚ ಜೇನುತುಪ್ಪಕ್ಕೆ ಬ್ರೌನ್ ಶುಗರ್ ಬೆರೆಸಿ ತುಟಿಯ ಮೇಲೆ ಸವರಿಕೊಳ್ಳಿ.ವೃತ್ತಾಕಾರವಾಗಿ ಅದನ್ನು ಸ್ಕ್ರಬ್ ಮಾಡಿ, ಅದೇ ರೀತಿ ಬಿಸಿ ನೀರಿನಿಂದ್ಲೂ ಸವರಿ. ನಂತರ ಸ್ವಚ್ಛವಾದ ಟೂತ್ ಬ್ರಶ್ ತೆಗೆದುಕೊಂಡು ನಿಮ್ಮ ತುಟಿಯ ಒಣ ಚರ್ಮದ ಮೇಲೆ ಆಡಿಸಿ, […]

Advertisement

Wordpress Social Share Plugin powered by Ultimatelysocial