ಗಿಡಗಳನ್ನು ಬೆಳೆಸುವುದರಿಂದ ಅರಣ್ಯೀಕರಣವಾಗುವುದು, ಮಳೆ ಬರುವುದು, ರೈತರುಗಳಿಗೆ ಆದಾಯ ಬರುವುದು ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಅರಸೀಕೆರೆಯಲ್ಲಿ ರೈತರಿಗೆ ವಿವಿಧ ಕಾಡು ಜಾತಿಯ ಸಸಿಗಳನ್ನು ವಿತರಿಸಿ ಬಳಿಕ ಮಾತನಾಡಿದ ಅವರು, ೬೫ ಸಾವಿರ ಏಕರೆ ರಿಜರ್ವ್ ಅರಣ್ಯ ಇದ್ದು ಮರ ಗಿಡ ಬೆಳೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಈ ಸಂದರ್ಭ ದಲ್ಲಿ ವಲಯ ಅರಣ್ಯಧಿಕಾರಿ ನಂದಕುಮಾರ್ ತೋಟಗಾರಿಕೆ ಇಲಾಖೆ ಬೋರೇಗೌಡ. ಜಲಾಯಾನ ಇಲಾಖೆಯ ಲಕ್ಷ್ಮಿಕಾಂತ್ ಚಂದ್ರಪ್ಪ ಗ್ರಾ.ಪಂ.ಸದಸ್ಯರಾದ ನಿತ್ಯಾನಂದ, ಕೊಂಡಬಾಗಿಲು ರವಿ, ಮುಖಂಡರುಗಳಾದ ಮಂಜೇಗೌಡ, ಮೈದನಹಳ್ಳಿ ದೇವರಾಜ, ಪುರಲೇಹಳ್ಳಿ ಮೂರ್ತಿನಾಯ್ಕ., ಕೃಷಿ ಅಧಿಕಾರಿ ಸುಬ್ರಹ್ಮಣ್ಯ, ರೈತರುಗಳು ,ಗ್ರಾಮಸ್ಥರು ಮತ್ತಿತರು ಉಪಸ್ಥಿತತರಿದ್ದರು.
ಗಿಡ ಬೆಳೆಸುವುದರಿಂದ ಅರಣ್ಯೀಕರಣವಾಗುವುದು-ಶಾಸಕ ಶಿವಲಿಂಗೇಗೌಡ
Please follow and like us: