ಚಾಲಕರಿಂದ ಸರ್ಕಾರದ ವಿರುದ್ಧ ಅಭಿಯಾನ

ಕೊರೊನಾ ಹಿನ್ನಲೆ ಲಾಕ್‌ಡೌನ್‌ನಿಂದಾಗಿ ಚಾಲಕರು ಮನೆಯಲ್ಲಿಯೇ ಕೂರುವಂತಹ ಸ್ಥಿತಿ ಉಂಟಾಗಿದೆ. ಚಾಲಕ ವೃತ್ತಿಯನ್ನೇ ನಂಬಿಕೊಂಡಿದ್ದ ಚಾಲಕರು ತೀವ್ರ ತೊಂದರೆಗೆ ಒಳಗಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸೆಲ್ಪಿ ವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ ಅಭಿಯಾನ ಆರಂಭಿಸಿದ್ದಾರೆ.  ಲಾಕ್‌ಡೌನ್ ಜಾರಿಯಾಗಿ ಒಂದೂವರೆ ತಿಂಗಳು ಸಮೀಪಿಸುತ್ತಿದ್ದರೂ ಚಾಲಕರ ಸಂಕಷ್ಟಗಳಿಗೆ ಈವರೆಗೆ ಸ್ಪಂದಿಸದೆ ಸರ್ಕಾರಗಳು ನಿರ್ಲಕ್ಷö್ಯ ತೋರಿವೆ ಎಂದು ಸಮಗ್ರ ಚಾಲಕರ ಒಕ್ಕೂಟ ಬೃಹತ್ ಪ್ರತಿಭಟನೆ ಆರಂಭಿಸಿವೆ.  ಸಾರಿಗೆ ಇಲಾಖೆ ಜವಾಬ್ದರಿ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷö್ಮಣ ಸವದಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ. ಚಾಲಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಅವರು ನಾಪತ್ತೆಯಾಗಿದ್ದಾರೆ. ಕನಿಷ್ಠ ಪಕ್ಷ ನಮ್ಮ ನೋವುಗಳಿಗೆ ಪರಿಹಾರ ನೀಡುವುದಿರಲಿ, ನಮ್ಮ ಸಮಸ್ಯೆಗಳನ್ನು ಕೇಳುವ ಸೌಜನ್ಯವನ್ನು ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್

Sun Apr 26 , 2020
ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ ” ಬೋಲೇ ಚುಡಿಯ ಬೋಲೇ ಕಂಗನಾ” ಹಾಡಿಗೆ. ಈ ಹಾಡು ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಪ್ರಪಂಚದಲ್ಲೇ ಪ್ರಸಿದ್ದ. ಸುಶಿ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು  ಹಂಚಿಕೊಂಡಿದ್ದು, ಅದರಲ್ಲಿ ರೋಗಿಗಳು ಸಹ ನಗುತ್ತಾ , ಹಾಡು ಮತ್ತು […]

Advertisement

Wordpress Social Share Plugin powered by Ultimatelysocial