ಬೆಂಗಳೂರು : ಪಾದರಾಯನಪುರ ಗೂಂಡಾಗಿರಿ ಪ್ರಕರಣದಲ್ಲಿ ಪುಂಡರಿಗೆ ಸಪೋರ್ಟ್ ಮಾಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಾದರಾಯನಪುರ ಗೂಂಡಾಗಿರಿ ಪ್ರಕರಣದಲ್ಲಿ ಶಾಸಕ ಜಮೀರ್ ಅಹಮ್ಮದ್ ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಹಿನ್ನಲೆ ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡುವಂತೆ ತಿಳಿಸಿದ್ದಾರೆ.
ದಿನಕ್ಕೊಂದು ಹೇಳಿಕೆ ನೀಡಬೇಡ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಸುಮ್ಮನೆ ವಿವಾದ ಮಾಡಿಕೊಳ್ಳಬೇಡ. ತಪ್ಪು ನಡೆದಿದೆ, ಪೊಲೀಸರು ಅವರ ಕೆಲಸ ಮಾಡ್ತಾರೆ. ಈ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡಬೇಡಿ ಎಂದು ತಿಳಿಹೇಳಿದ್ದಾರೆ.
ಜಮೀರ್ ಅಹಮ್ಮದ್ ಗೆ, ಸಿದ್ದರಾಮಯ್ಯ ಎಚ್ಚರಿಕೆ…!
Please follow and like us: