ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ

 

ಶ್ರೀನಗರ,ಫೆ.20- ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ. ಸಂತ್ರಸ್ಥ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಂಬನ್ ಜಿಲ್ಲೆಯ ಸಂಗಲ್ದನ್‍ಗೂಲ್ ರಸ್ತೆ ಸಮೀಪದ ಗೂಲ್ ತಹಸಿಲ್‍ನ ಸಂಗಲ್ದಾನ್ ದುಕ್ಸರ್ ದಲ್ವಾದ ಸುಮಾರು ಒಂದು ಚದುರ ಕಿ.ಮೀ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತದಿಂದ 13 ಮನೆಗಳು ನೆಲಸಮವಾಗಿದ್ದು, ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಟೆಂಟ್‍ಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಂಬಳಿಗಳು ಮತ್ತು ಪಾತ್ರೆಗಳನ್ನು ಸಹ ಒದಗಿಸಲಾಗಿದೆ. ಸೇನೆಯು ಅವರಿಗೆ ಆಹಾರವನ್ನೂ ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭೂಕುಸಿತದಿಂದಾಗಿ 33 ಕೆವಿ ವಿದ್ಯುತ್‍ಲೈನ್ ಹಾಗೂ ಪ್ರಮುಖ ನೀರು ಸಂಪರ್ಕ ಪೈಪ್‍ಲೈನ್‍ಗೆ ಭಾರಿ ಅಪಾಯ ಉಂಟು ಮಾಡಿದೆ. ಭೂಕುಸಿತಕ್ಕೆ ಕಾರಣ ಕಂಡು ಹಿಡಿಯುವಂತೆ ರಾಂಬನ್ ಡಿಸಿ ಮುಸ್ಸರತ್ ಇಸ್ಲಾಂ ಅವರು ಭೂ ವಿಜ್ಞಾನ ಗಣಿಗಾರಿಕೆ ಇಲಾಖೆಯ ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಗೂಲ್ ತಹಸಿಲ್ ಪ್ರಧಾನ ಕಛೇರಿಗಾಗಿ ಪರ್ಯಾಯ ರಸ್ತೆಯನ್ನು ರಚಿಸಲು ತುರ್ತು ವ್ಯವಸ್ಥೆ ಮಾಡಲು ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್ ಕಳುಹಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೂಪಾ.ಡಿಗೆ ಸಿಂಧೂರಿ ಅಭಿಮಾನಿಗಳಿಂದ 9 ಪ್ರಶ್ನೆ!

Mon Feb 20 , 2023
ಬೆಂಗಳೂರು: ನಿನ್ನೆಯಿಂದ ನಡೆಯುತ್ತಿರುವಂತ ಹಿರಿಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ಟಾಕ್ ವಾರ್, ಇಂದು ಕೂಡ ಮುಂದುವರೆದಿದೆ. ಇಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಅವರ ಅಭಿಮಾನಿಗಳು ಎನ್ನಲಾದಂತವರು ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಐಪಿಎಸ್ ಅಧಿಕಾರಿ ರೂಪಾ.ಡಿ ಅವರಿಗೆ 9 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಕುರಿತಂತೆ ಇಂದು ರೋಹಿಣಿ ಸಿಂಧೂರಿ ಆರ್ಗನೈಜೇಷನ್ ಎನ್ನುವಂತ ಫೇಸ್ ಬುಕ್ ಪುಟದಿಂದ ರೂಪಾ.ಡಿಗೆ 9 ಪ್ರಶ್ನೆಗಳನ್ನು ಕೇಳಲಾಗಿದೆ. ಅಭಿಮಾನಿಗಳೆಂದು ಹೇಳಿಕೊಂಡು ಕೇಳಿರುವಂತ ಪ್ರಶಅನೆಗಳಿಗೆ […]

Advertisement

Wordpress Social Share Plugin powered by Ultimatelysocial