ಗುಡಿಸಲಿನಲ್ಲಿದ್ರೂ ಬಡವರಿಗೆ ಅಕ್ಕಿ ವಿತರಿಸಿದ ಮಹಾತಾಯಿ

ಉಡುಪಿ: ಕೊರೊನಾ ಸೋಂಕು ಹರಡುತ್ತಿರೋ ಈ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು, ಶ್ರೀಮಂತರು ಬಡವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ನಡೆಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳೆ ತಾನೇ ಗುಡಿಸಲಲ್ಲಿ ವಾಸವಾಗಿದ್ರೂ, ಬಡವರ ಸಂಕಷ್ಟಕ್ಕೆ ನೆರವಾಗೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ..ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಲ್ಲೋ ಇಲ್ಲೊ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದಕ್ಕ ಎಂಬುವವರು, ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ ತಲಾ 5 ಕೆಜಿಯಂತೆ 700 ಕೆ.ಜಿ. ಅಕ್ಕಿ ಹಂಚಿದ್ದಾರೆ.  ಇಷ್ಟೇ ಅಲ್ಲದೇ ತನಗೆ ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಅಕ್ಕಿಯನ್ನೂ ಕೂಡ ತನ್ನ ಮನೆ ವಠಾರದ ಕೂಲಿ ಕಾರ್ಮಿಕರಿಗೆ ಹಂಚಿ, ಬಡವರ ಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಹೀಗೆ ತಾನೇ ಕಷ್ಟದಲ್ಲಿದ್ರೂ, ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಈಕೆಯ ಮಾನವೀಯತೆ ಗುಣ ಎಲ್ಲರಿಗೆ ಮಾದರಿಯಾಗಿದೆ..

 

 

Please follow and like us:

Leave a Reply

Your email address will not be published. Required fields are marked *

Next Post

ಬೆಕ್ಕುಗಳಿಗೆ ಫೆಲೆನ್ ಪಾರ್ವೋವೈರಸ್ ಭೀತಿ

Wed Apr 22 , 2020
ಕೇರಳ: ಕೋವಿಡ್ ಸೋಂಕಿನ ನಡುವೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪಿವೆ. ಆದರೆ ಈ ಪ್ರಕರಣಕ್ಕೆ ಫೆಲೆನ್ ಪಾರ್ವೋ ವೈರಸ್ ಕಾರಣ ಎಂಬುದು ಗೊತ್ತಾಗಿದೆ. ಜಿಲ್ಲೆಯ ಮಾನಂದವಾಡಿ ಎಂಬಲ್ಲಿ ಕಳೆದ ಮೂರು ದಿನಗಳಲ್ಲಿ ೧೫ಕ್ಕೂ ಹೆಚ್ಚು ಬೆಕ್ಕುಗಳು ಮೃತ ಪಟ್ಟಿವೆ. ಹೀಗೆ ಸಾವಿಗೀಡಾದ ಬೆಕ್ಕುಗಳ ದೇಹದ ಅಸ್ಥಿಪಂಜರ ಸಂಗ್ರಹಿಸಿದ ಪಶುಸಂಗೋಪನಾ ಇಲಾಖೆ ವೈದ್ಯರು, ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಬೆಕ್ಕುಗಳ ಸಾವು ವೈರಸ್‌ನಿಂದ ಸಂಭವಿಸಿದೆ ಎಂಬುದು ದೃಢಪಟ್ಟಿದೆ. ಈ ಸುದ್ದಿ ಕೇಳಿದ ಜನರು […]

Advertisement

Wordpress Social Share Plugin powered by Ultimatelysocial