ಜೂನಿಯರ್ ರಣಬೀರ್ ಕಪೂರ್ ಸಾವು

ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಇಂಟರ್​ನೆಟ್​ನಲ್ಲಿ ಸೆನ್ಸೆಷನ್​ ಸೃಷ್ಟಿಸಿದ್ದರು. ರಣಬೀರ್ ಅವರಂತೆ ಫೋಟೋಶೂಟ್​ ಮಾಡಿಸಿ, ಅವರಂತೆ ಬಾಡಿ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದರು. ಕಾಶ್ಮೀರ ಮೂಲದ ಜುನೇದ್​ ಶಾ, ಥೇಟ್ ನೋಡಲು ರಣಬೀರ್ ಕಪೂರ್​ ಅವರನ್ನೇ ಹೊಲುತ್ತಿದ್ದರು. ಆದರೆ, ಇದೀಗ ​​ಅದೇ ವ್ಯಕ್ತಿ ಸಾವನ್ನಪ್ಪಿದ್ದಾನೆ.ಶ್ರೀನಗರದ ಇಲಾಹಿ ಭಾಗ್​ನಲ್ಲಿ ಕಾರ್ಡಿಯಾಕ್​ ಅರೆಸ್ಟ್ ನಿಂದಾಗಿ ಜುನೈದ್​ ಕೊನೆಯುಸಿರೆಳೆದಿದ್ದಾರೆ. ಮಾಡೆಲಿಂಗ್​ ಮತ್ತು ಸಿನಿಮಾ ಕಲಿಕೆಯಲ್ಲಿ ತೊಡಗಿಸಿಕೊಂಡು ಕಳೆದ ಕೆಲ ವರ್ಷಗಳಿಂದ ಮುಂಬೈನಲ್ಲಿಯೇ ವಾಸವಾಗಿದ್ದ ಜುನೈದ್,​ ಇತ್ತೀಚೆಗಷ್ಟೇ ಶ್ರೀನಗರಕ್ಕೆ ಆಗಮಿಸಿದ್ದರು. ಆದರೆ, ಇದೀಗ ಕಾರ್ಡಿಯಾಕ್​ ಅರೆಸ್ಟ್ ನಿಂದಾಗಿ ಸಾವನ್ನಪ್ಪಿದ್ದಾರೆ. ​ ಅವರ ಸಾವಿಗೆ ಅವರ ಅಭಿಮಾನಿ ಬಳಗ ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ರ‍್ಕಾರದ ವಿರುದ್ಧ ಕೆಂಡಾಮಂಡಲವಾದ ಸಲೀಂ ಅಹ್ಮದ್

Fri Jul 17 , 2020
ಆರೋಗ್ಯ ಸಚಿವ ಶ್ರೀರಾಮುಲು ‘ದೇವರೇ ನಮ್ಮನ್ನು ಕಾಪಾಡಬೇಕು’ ಎಂಬ ಹೇಳಿಕೆ ನೀಡಿದ್ದಾರೆ. ಇದು ರ‍್ಕಾರದ ಅಸರ‍್ಥತೆ ಮತ್ತು ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಕರ‍್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ ರ‍್ಕಾರ ವಿಫಲವಾಗಿದ್ದು, ಸೋಂಕಿತರಿಗೆ ಚಿಕಿತ್ಸೆ, ಹೆಚ್ಚು ಪರೀಕ್ಷೆ ಮಾಡುವುದರಲ್ಲೂ ವಿಫಲವಾಗಿದೆ. ಶ್ರೀರಾಮುಲು ಅವರ ಹೇಳಿಕೆ ರ‍್ಕಾರದ ಬೇಜವಾಬ್ದಾರಿತನ ತೋರಿಸುತ್ತದೆ. ಆರೋಗ್ಯ ಸಚಿವರು ತಮ್ಮ ಸಚಿವ ಸ್ಥಾನದಲ್ಲಿ ಮುಂದುವರೆಯಲು ಯಾವ ನೈತಿಕತೆಯನ್ನೂ […]

Advertisement

Wordpress Social Share Plugin powered by Ultimatelysocial