ಡಬಲ್ ಮರ್ಡರ್ ಮಾಡಿದ ಭೂಪ ಅಂದರ್

ಇಡೀ ಬೆಂಗಳೂರನ್ನ ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನ ಕೊನೆಗು ಪೊಲೀಸ್ರು ಬಂಧಿಸಿದ್ದಾರೆ. ರಾಜೇಶ್(೨೫) ಬಂಧಿತ ಆರೋಪಿ. ಕಳೆದ ಮಂಗಳವಾರ ಅನ್ನಪೂರ್ಣೇಶ್ವರಿ ನಗರದ ಬಳಿ ಇರುವ ಕಾಮಗಾರಿ ಕಟ್ಟಡದಲ್ಲಿ ಸಹದೇವ, ದಂಡಪಾಣಿ ಸಹೋದರ ಜೋಡಿ ಕೊಲೆಯಾಗಿತ್ತು. ಕೊಲೆ ನಡೆಸಿದ್ದು ಸ್ವಂತ ತಮ್ಮ ರಾಜೇಶ್ ಅನ್ನೋದು ಪೊಲೀಸ್ರಿಗೆ ತಿಳಿದಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸ್ರಿಗೆ ಮೂಡಲಪಾಳ್ಯ ಸರ್ಕಲ್ ಬಳಿ ಆರೋಪಿ ರಾಜೇಶ್ ಇರೋದಾಗಿ ಮಾಹಿತಿ ಸಿಗುತ್ತೆ. ತಕ್ಷಣ ಸ್ಥಳಕ್ಕೆ ಹೋಗಿ ಆರೋಪಿಯನ್ನ ಪೊಲೀಸ್ರು ಬಂಧಿಸಿದ್ದಾರೆ. ಮೃತ ಸಹದೇವ ಹಾಗೂ ದಂಡಪಾಣಿ ಇಬ್ಬರು ಮಾತ್ರ ಕೆಲಸಕ್ಕೆ ಹೋಗುತ್ತಿದ್ದರು. ಮೃತರಾದ ಸಹೋದರರು ಕುಡಿಯಲು ಕೂತಾಗ ಆರೋಪಿ ರಾಜೇಶ್ ನನಗೂ ಎಣ್ಣೆ ಬೇಕು ಅಂತ ಹೇಳಿದ್ದಾನೆ ಆದ್ರೆ ನೀನು ಇನ್ನು ಚಿಕ್ಕವನು ಡ್ರಿಂಕ್ಸ್ ಬೇಡ ಅಂದಿದ್ದಾರೆ. ಈ ವೇಳೆ ಸಹೋದರರ ಮೇಲೆ ಕೋಪಗೊಂಡಿದ್ದ ರಾಜೇಶ್ ಅಲ್ಲಿಯೇ ಇದ್ದ ದೊಣ್ಣೆಯಲ್ಲಿ ಹೊಡೆದಿದ್ದಾನೆ. ಮೊದಲಿಗೆ ದಂಡಪಾಣಿಗೆ ಹೊಡೆದಿದ್ದನ್ನ ಪ್ರಶ್ನಿಸಲು ಹೋದ ಸಹದೇವನಿಗೂ ಹಲ್ಲೆ ನಡೆಸಿದ್ದಾನೆ. ಆರೋಪಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಹೋದರರು ಸಾವನಪ್ಪಿದ್ದಾರೆ ..ನಂತರ ಯಾರಿಗೂ ತಿಳಿಯದಂತೆ ಬಿಲ್ಟಿಂಗ್ ನ ಗ್ರೌಂಡ್ ಫ್ಲೋರ್ ನಲ್ಲಿ ಮೃತದೇಹಗಳನ್ನ ಎಸೆದು ರಾಜೇಶ್ ಎಸ್ಕೇಪ್ ಆಗಿದ್ದ. ಸದ್ಯ ಆರೋಪಿ ರಾಜೇಶ್ ನನ್ನ ಬಂಧಿಸಿರುವ ಪೊಲೀಸ್ರು ಮತ್ತಷ್ಟು ತನಿಖೆಯನ್ನ ನಡೆಸುತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಭಿವೃದ್ಧಿ ಕಾಣದೆ ಮರೀಚಿಕೆ ಆದ ಕಕ್ಕಲದೊಡ್ಡಿ

Fri Jun 19 , 2020
ಜಾಲಹಳ್ಳಿಗೆ ಸಮಿಪದ ಕಕ್ಕಲದೊಡ್ಡಿ ಮಾರ್ಗವಗಿ ಗಾಣದಾಳಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಪ್ರಯಾಣಿಕರು ಸಂಚಾರಕ್ಕೆ ಹರ ಸಾಹಸ ಪಡುವಂತಾಗಿದೆ. ಪಟ್ಟಣದಿಂದ ಜಾಲಹಳ್ಳಿ ಕಕ್ಕಲದೊಡ್ಡಿ ಮಾರ್ಗವಾಗಿ ಗಾಣದಾಳ ಮ್ಯಾಕಲದೊಡ್ಡಿ ಸೇರಿದಂತೆ ನಾನಾ ಗ್ರಾಮಗಳಿಗೆ ತೆರಳಲು ಈ ರಸ್ತೆ ಹೆಚ್ಚು ಬಳಕೆಯಲ್ಲಿದೆ. ಬೈಕ್,ಜೀಪು,ಕಾರು,ಬಸ್, ಸೇರಿದಂತೆ ವಾಹನಗಳು ಸಂಚಾರಕ್ಕೆ ತೊಂದರೆಯಾಗಿದೆ. ಮತ್ತು ರಸ್ತೆ ಸರಿಯಾಗಿ ಇಲ್ಲದ ಕಾರಣ ಗ್ರಾಮಕ್ಕೆ ಬಸ್ ಬರುತ್ತಾ ಇಲ್ಲ. ಹೀಗಾಗಿ ಗ್ರಾಮದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ರಸ್ತೆ […]

Advertisement

Wordpress Social Share Plugin powered by Ultimatelysocial