ಕುಕ್ಕರ್ ಬ್ಲಾಸ್ಟ್ ಬಿಜೆಪಿ ಷಡ್ಯಂತ್ರ ಎಂದ ಡಿಕೆ ಶಿವಕುಮಾರ್ ಹೇಳಿಕೆಗೆ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂತಹ ಘಟನೆ ಎಲ್ಲಿಯೂ ನಡೆಯಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೀತಾ ಇದೆ. ಯಾರನ್ನೂ ಸಮರ್ಥಿಸಿಕೊಳ್ಳಲ್ಲ. ಡಿಕೆಶಿ ಎಲ್ಲಿ ಹೇಳಿದ್ದಾರೆ? ಏನ್ ಹೇಳಿದ್ದಾರೆ ಗೊತ್ತಿಲ್ಲ ಅದರ ಬಗ್ಗೆ ನಾನೂ ಚರ್ಚೆ ಮಾಡ್ತೀನಿ ಎಂದು ಹೇಳಿದರು. ಆದರೆ ಮಂಗಳೂರಲ್ಲಿ ಕೋಮು ಸೌಹಾರ್ದ ಕದಡಲು ಇಂತಹ ಘಟನೆ ನಡೆಯುತ್ತೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:
https://play.google.com/store/apps/details?id=com.speed.newskannada