ದಾಖಲೆ ಇಲ್ಲದ 8ಲಕ್ಷ ಹಣ ವಶ…!

ಚಿಕ್ಕೋಡಿ: ದಾಖಲೆ ಇಲ್ಲದೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 8 ಲಕ್ಷ ಹಣವನ್ನು ಪಟ್ಟಣದ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ಇಂದು ವಶ ಪಡಿಸಿಕೊಂಡಿದ್ದಾರೆ. ಮೂಡಲಗಿ ಪಟ್ಟಣದ ನಿವಾಸಿ ವೆಂಕಪ್ಪ ಲಕ್ಕಪ್ಪಾ ಚೌಡಕಿ ಅವರು ಹಣ ಸಾಗಿಸುತ್ತಿದ್ದರು ಸಾಂಗಲಿಯಿಂದ ಸ್ವಗ್ರಾಮಕ್ಕೆ ಸರ್ಕಾರಿ ಬಸ್ಸಿನಲ್ಲಿ ಹಣ ತೆಗೆದುಕೊಂಡು ಹೋಗುತ್ತಿದ್ದರು.  ಸಾಂಗಲಿಯಿಂದ ಮೂಡಲಗಿಗೆ ಬಸ್ಸಿನಲ್ಲಿ ಹೋಗುವಾಗ ಕುಡಚಿ ಚೆಕ್ ಪೋಸ್ಟನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಈ ನಗದು ಹಣ ಪತ್ತೆಯಾಗಿದೆ. ಯಾವುದೇ ದಾಖಲೆಗಳು ಇಲ್ಲದ ಕಾರಣ ಕುಡಚಿ ಪೋಲಿಸರು ಹಣವನ್ನು ವಶಪಡಿಸಿಕೊಂಡು ವೆಂಕಪ್ಪ ಲಕ್ಕಪ್ಪಾ ಚೌಡಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಶಿವಕುಮಾರ್ ಅಪರಂಜಿ,ಸಿಪಿಐ ರವಿಚಂದ್ರ ಡಿ ಬಿ, ಕುಡಚಿ ಪಿಎಸ್ಐ ಮಾಳಪ್ಪಾ ಪೂಜೆರಿ, ಸೇರಿದಂತೆ ಇನ್ನಿತರರು ಇದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿ. ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಘೋಷಣೆ ಹಿನ್ನೆಲೆ...!

Thu Apr 13 , 2023
ವಿ. ಸೋಮಣ್ಣಗೆ ಚಾಮರಾಜನಗರ ಟಿಕೆಟ್ ಘೋಷಣೆ ಹಿನ್ನೆಲೆ. ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ,  ಕಾರ್ಯಕರ್ತರ ಸಭೆಯಲ್ಲಿ ಗಳ ಗಳನೆ ಕಣ್ಣೀರು ಹಾಕಿದ ಪ್ರಬಲ ಆಕಾಂಕ್ಷಿ ನಾಗಶ್ರೀ ಪ್ರತಾಪ್, ಮನೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಶಾಸಕ ದಿ. ಗುರುಸ್ವಾಮಿ ಪುತ್ರಿ ನಾಗಶ್ರೀ ಪ್ರತಾಪ್, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದ ನಾಗಶ್ರೀ ಪ್ರತಾಪ್,  ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರು ಹಾಕಿದ ಬಿಜೆಪಿ ನಾಯಕಿ….!  ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಡೆ ನಿರ್ಧರಿಸಲಿರುವ ನಾಗಶ್ರೀ ಪ್ರತಾಪ್,  […]

Advertisement

Wordpress Social Share Plugin powered by Ultimatelysocial