ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು ರೈತ ಸಮಸ್ಯೆ ಹೇಳಲು ಹೋದಾಗ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತಮಗಾಗಿರುವ ಸಮಸ್ಯೆ ಹೇಳಲು ರೈತ ಕರೆ ಮಾಡಿದರೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತಿರುವ ದೇವನಹಳ್ಳಿ ತಹಶೀಲ್ದಾರ್ ಅಜಿತ್ ರಾಯ್ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ರೈತನ ಗೋಳು ಕೇಳದ ದೇವನಹಳ್ಳಿ ಜಿಲ್ಲಾಡಳಿತಿಂದ ಪ್ರತಿ ಬಾರಿ ಈ ಸಮಸ್ಯೆಗೆ ಉತ್ತರ ಕಾಣದ ರೈತ. ಎಚ್ 1 ಎನ್ 1 ವ್ಯಾಲಿ ಯಿಂದ ದೇವನಹಳ್ಳಿಯ ಆವತಿ ಕೆರೆಗೆ ನೀರು ಬರುತ್ತಿದೆ. ಕಾಲುವೆ ನಿರ್ಮಾಣ ಮಾಡದ ಕಾರಣ ಹರಿವು ಹೆಚ್ಚಾಗಿ ನೀರಿನ ಬ್ಲಾಕೇಜ್ ನಿಂದ ಹಾರೋ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಲಗಳಿಗೆ ನೀರು ಹರಿಯುತ್ತಿದೆ. ಇದರಿಂದ ಹೊಲ ಗದ್ದೆಯೆಲ್ಲ ಚಿಕ್ಕ ಕೆರೆಯಂತೆ ಆಗಿದೆ. ಹೀಗಾಗಿ ತರಕಾರಿ ಬೆಳೆದಂತ ರೈತನ ಬೆಳೆ ಕೆರೆಯ ನೀರು ನಿಂತು ಸಂಪೂರ್ಣ ನಾಶವಾಗಿದೆ. ಇನ್ನೂ ಇದರ ಬಗ್ಗೆ ಸಾಕಷ್ಟು ಬಾರಿ ರೈತ ಜಿಲ್ಲಾಡಳಿತಕ್ಕೆ, ನೀರಾವರಿ ಇಲಾಖೆಗೆ ಮನವಿ ಮಾಡಿದ್ದೇವೆ. ಮನವಿ ಮಾಡಿದ್ದರೂ ಈ ಇಲಾಖೆಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಮತ್ತು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.
ದೇವನಹಳ್ಳಿಯಲ್ಲಿ ರೈತನ ಹೊಲಗಳಿಗೆ ನುಗ್ಗಿದ ಕೆರೆಯ ನೀರು
Please follow and like us: