ಕೊರೋನಾ ವೈರಸ್, ದೇಶೀಯ ಉತ್ಪನ್ನ ಮತ್ತು ಚೀನಾದೊಂದಿಗೆ ಗಡಿ ವಿವಾದ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್-೧೯ ಪರೀಕ್ಷೆಯನ್ನು ನಿರ್ಬಂಧಗೊಳಿಸಿ ಸಾವಿನ ಸಂಖ್ಯೆಯನ್ನು ತಪ್ಪಾಗಿ ವರದಿ ಮಾಡುತ್ತಿದೆ. ಜಿಡಿಪಿ ವಿಚಾರದಲ್ಲಿ ಹೊಸ ಲೆಕ್ಕಾಚಾರ ವಿಧಾನಗಳನ್ನು ಅನುಸರಿಸುತ್ತಿದೆ. ಇನ್ನು ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾ ಆಕ್ರಮಣಶೀಲತೆ ತೋರಿಸುತ್ತಿದೆ, ಭ್ರಮೆ ಶೀಘ್ರವೇ ಮುರಿಯಲಿದ್ದು ಇದಕ್ಕೆ ಭಾರತ ತಕ್ಕ ಬೆಲೆ ತೆರಬೇಕಾಗುತ್ತದೆ ಸುಳ್ಳು ಹೇಳುವುದನ್ನು ಬಿಜೆಪಿ ಕರಗತ ಮಾಡಿಕೊಂಡಿದೆ ಎಂದಿದ್ದಾರೆ.
ದೇಶದ ವಿಷಯದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ
Please follow and like us: