ನಿರ್ಮಾಣದತ್ತ ನಿಖಿಲ್ ಕುಮಾರಸ್ವಾಮಿ 

ಮಾಜಿ  ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ  ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕ-ಪ್ರದರ್ಶಕರಾಗಿ ಗುರುತಿಸಿಕೊಂಡವರು. ಡಾ. ವಿಷ್ಣುವರ್ಧನ್​ ಅಭಿನಯದ ‘ಸೂರ್ಯವಂಶ’, ಶಿವರಾಜಕುಮಾರ್​ ಅಭಿನಯದ ‘ಗಲಾಟೆ ಅಳಿಯಂದ್ರು’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ಈಗ ಅವರ ಮಗ ನಿಖಿಲ್​ ಸಹ ಅಪ್ಪನ ಹಾದಿಯಲ್ಲೇ ನಡೆದಿದ್ದಾರೆ. ಈಗಾಗಲೇ ‘ಜಾಗ್ವಾರ್​’, ‘ಕುರುಕ್ಷೇತ್ರ’, ‘ಸೀತಾರಾಮ ಕಲ್ಯಾಣ’ ಚಿತ್ರಗಳಲ್ಲಿ ನಟಿಸಿರುವ ನಿಖಿಲ್​, ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಸಾದ್​ ಖಾನ್​ ನಿರ್ದೇಶನದಲ್ಲಿ ಇದೀಗ ‘ಸಂಗೀತ್​’ ಎಂಬ ಚಿತ್ರವನ್ನು ನಿರ್ಮಿಸುವತ್ತ ಚಿತ್ರ ಹರಿಸಿದ್ದಾರೆ. ಸಾದ್​ ಖಾನ್​ ಇದಕ್ಕೂ ಮುನ್ನ ‘ಹಂಬಲ್​ ಪೊಲಿಟಿಶಿಯನ್​ ನೊಗರಾಜ್​’ ಎಂಬ ಕಾಮಿಡಿ ಚಿತ್ರ ನಿರ್ದೇಶಿಸಿದ್ದರು. ಇದೀಗ ಅವರ ‘ಸಂಗೀತ್’ ಎಂಬ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಈ ಚಿತ್ರವನ್ನು ನಿಖಿಲ್​ ಮತ್ತು ಚಂದ್ರ ಮನೋಹರ್​ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಚಂದ್ರ ಮನೋಹರ್​, ಲಹರಿ ಸಂಸ್ಥೆಯ ಮನೋಹರ್​ ನಾಯ್ಡು ಅವರ ಮಗನಾಗಿದ್ದು, ನಿಖಿಲ್​ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸತತ ಮೂರನೇ ಬಾರಿ ಪೊಲೀಸ್ ಠಾಣೆ ಸೀಲ್‌ಡೌನ್

Thu Jul 23 , 2020
ಔರಾದ್ ಪಟ್ಟಣದಲ್ಲಿ 10 ರಿಂದ 15ರ ತನಕ ಪ್ರತಿ ನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಔರಾದ್ ಪಟ್ಟಣದ  ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ದೃಡಪಟ್ಟಿದೆ. ಈ ಹಿನ್ನಲೆ ಬುಧವಾರ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಿ ರೋಗಾಣು ನಿವಾರಕ ಔಷಧಿ ಸಿಂಪಡಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಪೊಲೀಸ್ ಇಲಾಖೆಯ ಕಾರ್ಯ ವಿಳಂಬಆಗುವ ಸಾಧ್ಯತೆ ಇದೆ. ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ನಾಯ್ಕ್  ರವರು ಕಛೇರಿಯ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ […]

Advertisement

Wordpress Social Share Plugin powered by Ultimatelysocial