ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕ-ಪ್ರದರ್ಶಕರಾಗಿ ಗುರುತಿಸಿಕೊಂಡವರು. ಡಾ. ವಿಷ್ಣುವರ್ಧನ್ ಅಭಿನಯದ ‘ಸೂರ್ಯವಂಶ’, ಶಿವರಾಜಕುಮಾರ್ ಅಭಿನಯದ ‘ಗಲಾಟೆ ಅಳಿಯಂದ್ರು’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದರು. ಈಗ ಅವರ ಮಗ ನಿಖಿಲ್ ಸಹ ಅಪ್ಪನ ಹಾದಿಯಲ್ಲೇ ನಡೆದಿದ್ದಾರೆ. ಈಗಾಗಲೇ ‘ಜಾಗ್ವಾರ್’, ‘ಕುರುಕ್ಷೇತ್ರ’, ‘ಸೀತಾರಾಮ ಕಲ್ಯಾಣ’ ಚಿತ್ರಗಳಲ್ಲಿ ನಟಿಸಿರುವ ನಿಖಿಲ್, ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಸಾದ್ ಖಾನ್ ನಿರ್ದೇಶನದಲ್ಲಿ ಇದೀಗ ‘ಸಂಗೀತ್’ ಎಂಬ ಚಿತ್ರವನ್ನು ನಿರ್ಮಿಸುವತ್ತ ಚಿತ್ರ ಹರಿಸಿದ್ದಾರೆ. ಸಾದ್ ಖಾನ್ ಇದಕ್ಕೂ ಮುನ್ನ ‘ಹಂಬಲ್ ಪೊಲಿಟಿಶಿಯನ್ ನೊಗರಾಜ್’ ಎಂಬ ಕಾಮಿಡಿ ಚಿತ್ರ ನಿರ್ದೇಶಿಸಿದ್ದರು. ಇದೀಗ ಅವರ ‘ಸಂಗೀತ್’ ಎಂಬ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಈ ಚಿತ್ರವನ್ನು ನಿಖಿಲ್ ಮತ್ತು ಚಂದ್ರ ಮನೋಹರ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಚಂದ್ರ ಮನೋಹರ್, ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಅವರ ಮಗನಾಗಿದ್ದು, ನಿಖಿಲ್ ಅಭಿನಯದ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.
ನಿರ್ಮಾಣದತ್ತ ನಿಖಿಲ್ ಕುಮಾರಸ್ವಾಮಿ
Please follow and like us: